ಗ್ರಾಮ ಪಂಚಾಯಿತಿ ಸದಸ್ಯ ಜೀವನ್ಕುಮಾರ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ಈಗ ಗ್ರಾಮೀಣ ಪ್ರದೇಶದಲ್ಲೂ ಕಾಣಿಸಿಕೊಂಡು ಹೆಚ್ಚಳವಾಗುತ್ತಿದೆ. ಹಳ್ಳಿಯ ಜನತೆಯು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅರಳಿಕಟ್ಟೆ, ದೇವಸ್ಥಾನ, ಟೀ ಸ್ಟಾಲ್, ಹೋಟೆಲ್ಗಳ ಮುಂದೆ ಗುಂಪಾಗಿ ಕೂರಬಾರದು ಎಂದು ಮನವಿ ಮಾಡಿದರು.