ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆಗಳಿಗೆ ಪುಟ್ಟಣ್ಣ ಸ್ಪಂದಿಸಿಲ್ಲ. ಬಿಜೆಪಿ ಸರ್ಕಾರದ ಮುಂದೆ ಪುಟ್ಟಣ್ಣ ಶಿಕ್ಷಕರ ಸಮಸ್ಯೆ ಹೇಳಿಕೊಂಡಿಲ್ಲ. ಶಿಕ್ಷಕರು ಕೊಟ್ಟಿದ್ದ ಅಧಿಕಾರವನ್ನು ಬಿಟ್ಟು ಹೆಚ್ಚಿನ ಅಧಿಕಾರ ಪಡೆಯಲು ಶಾಸಕರಾಗಲು ಪುಟ್ಟಣ್ಣ ಹೊರಟಿದ್ದರು. ಆದರೆ, ಅಲ್ಲಿ ಸಫಲವಾಗಲಿಲ್ಲ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ತಂದಿರುವ ಅವರನ್ನು ಶಿಕ್ಷಕ ವರ್ಗ ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.