ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಸಂಘದ ನಾಮಫಲಕಕ್ಕೆ ಹಾನಿ

Last Updated 4 ಸೆಪ್ಟೆಂಬರ್ 2021, 3:03 IST
ಅಕ್ಷರ ಗಾತ್ರ

ಮಾಗಡಿ: ಡಾ.ಬಿ.ಆರ್‌. ಅಂಬೇಡ್ಕರ್‌ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಾಮಫಲಕವನ್ನು ಕಿತ್ತುಹಾಕಿ ಅವಮಾನ ಮಾಡಿರುವ ಘಟನೆ ಕೊಟ್ಟಗಾರಹಳ್ಳಿಯಲ್ಲಿ ಗುರುವಾರ ನಡೆದಿದೆ.

ಮೇಲ್ವರ್ಗದವರು ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನೇ ಬಳಸಿಕೊಂಡು ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಸಿ. ಜಯರಾಮ್‌ ಆರೋಪಿಸಿದರು.

ಅದೇ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ಪಟ್ಟು ಹಿಡಿದ ಹೋರಾಟಗಾರರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ
ನಡೆಸಿದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಓಂ ಪ್ರಕಾಶ್‌ ಮತ್ತು ಸಿಪಿಐ ರವಿ ಬಿ. ಹೋರಾಟಗಾರರಾದ ಸಿ. ಜಯರಾಮ್‌, ಜಿ. ಕೃಷ್ಣ, ದೊಡ್ಡಿಲಕ್ಷ್ಮಣ್‌, ಗೋಪಾಲಕೃಷ್ಣ, ತೋಟದಮನೆ ಗಿರೀಶ್‌, ಗಂಗಹನುಮಯ್ಯ, ಉಮೇಶ್‌, ಪ್ರಸನ್ನಕುಮಾರ್‌ ಅವರೊಂದಿಗೆ ಚರ್ಚಿಸಿದರು.

‘ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವರೂ ಸಭೆ ಸೇರಿ ಚರ್ಚಿಸಿ ಅಂಬೇಡ್ಕರ್‌ ಸಂಘದ ನಾಮಫಲಕ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿಪಿಐ ರವಿ ತಿಳಿಸಿದರು.

ಕೊಟ್ಟಗಾರಹಳ್ಳಿ ಮುಖಂಡರಾದ ರೇವಣ್ಣ, ರವಿತೇಜ, ನಂಜಯ್ಯ, ವಿಜಯಕುಮಾರ್‌, ರಮೇಶ್‌, ರವಿಕುಮಾರ್‌, ಗ್ರಾ.ಪಂ. ಮಾಜಿ ಸದಸ್ಯ ಚಿಕ್ಕವೆಂಕಟಯ್ಯ, ಮೂಡ್ಲಯ್ಯ ಚರ್ಚೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT