<p><strong>ಮಾಗಡಿ: </strong>ಡಾ.ಬಿ.ಆರ್. ಅಂಬೇಡ್ಕರ್ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಾಮಫಲಕವನ್ನು ಕಿತ್ತುಹಾಕಿ ಅವಮಾನ ಮಾಡಿರುವ ಘಟನೆ ಕೊಟ್ಟಗಾರಹಳ್ಳಿಯಲ್ಲಿ ಗುರುವಾರ ನಡೆದಿದೆ.</p>.<p>ಮೇಲ್ವರ್ಗದವರು ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನೇ ಬಳಸಿಕೊಂಡು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಸಿ. ಜಯರಾಮ್ ಆರೋಪಿಸಿದರು.</p>.<p>ಅದೇ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ಪಟ್ಟು ಹಿಡಿದ ಹೋರಾಟಗಾರರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ<br />ನಡೆಸಿದರು.</p>.<p>ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಓಂ ಪ್ರಕಾಶ್ ಮತ್ತು ಸಿಪಿಐ ರವಿ ಬಿ. ಹೋರಾಟಗಾರರಾದ ಸಿ. ಜಯರಾಮ್, ಜಿ. ಕೃಷ್ಣ, ದೊಡ್ಡಿಲಕ್ಷ್ಮಣ್, ಗೋಪಾಲಕೃಷ್ಣ, ತೋಟದಮನೆ ಗಿರೀಶ್, ಗಂಗಹನುಮಯ್ಯ, ಉಮೇಶ್, ಪ್ರಸನ್ನಕುಮಾರ್ ಅವರೊಂದಿಗೆ ಚರ್ಚಿಸಿದರು.</p>.<p>‘ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವರೂ ಸಭೆ ಸೇರಿ ಚರ್ಚಿಸಿ ಅಂಬೇಡ್ಕರ್ ಸಂಘದ ನಾಮಫಲಕ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿಪಿಐ ರವಿ ತಿಳಿಸಿದರು.</p>.<p>ಕೊಟ್ಟಗಾರಹಳ್ಳಿ ಮುಖಂಡರಾದ ರೇವಣ್ಣ, ರವಿತೇಜ, ನಂಜಯ್ಯ, ವಿಜಯಕುಮಾರ್, ರಮೇಶ್, ರವಿಕುಮಾರ್, ಗ್ರಾ.ಪಂ. ಮಾಜಿ ಸದಸ್ಯ ಚಿಕ್ಕವೆಂಕಟಯ್ಯ, ಮೂಡ್ಲಯ್ಯ ಚರ್ಚೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: </strong>ಡಾ.ಬಿ.ಆರ್. ಅಂಬೇಡ್ಕರ್ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಾಮಫಲಕವನ್ನು ಕಿತ್ತುಹಾಕಿ ಅವಮಾನ ಮಾಡಿರುವ ಘಟನೆ ಕೊಟ್ಟಗಾರಹಳ್ಳಿಯಲ್ಲಿ ಗುರುವಾರ ನಡೆದಿದೆ.</p>.<p>ಮೇಲ್ವರ್ಗದವರು ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳನ್ನೇ ಬಳಸಿಕೊಂಡು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಸಿ. ಜಯರಾಮ್ ಆರೋಪಿಸಿದರು.</p>.<p>ಅದೇ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ಪಟ್ಟು ಹಿಡಿದ ಹೋರಾಟಗಾರರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ<br />ನಡೆಸಿದರು.</p>.<p>ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಓಂ ಪ್ರಕಾಶ್ ಮತ್ತು ಸಿಪಿಐ ರವಿ ಬಿ. ಹೋರಾಟಗಾರರಾದ ಸಿ. ಜಯರಾಮ್, ಜಿ. ಕೃಷ್ಣ, ದೊಡ್ಡಿಲಕ್ಷ್ಮಣ್, ಗೋಪಾಲಕೃಷ್ಣ, ತೋಟದಮನೆ ಗಿರೀಶ್, ಗಂಗಹನುಮಯ್ಯ, ಉಮೇಶ್, ಪ್ರಸನ್ನಕುಮಾರ್ ಅವರೊಂದಿಗೆ ಚರ್ಚಿಸಿದರು.</p>.<p>‘ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವರೂ ಸಭೆ ಸೇರಿ ಚರ್ಚಿಸಿ ಅಂಬೇಡ್ಕರ್ ಸಂಘದ ನಾಮಫಲಕ ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿಪಿಐ ರವಿ ತಿಳಿಸಿದರು.</p>.<p>ಕೊಟ್ಟಗಾರಹಳ್ಳಿ ಮುಖಂಡರಾದ ರೇವಣ್ಣ, ರವಿತೇಜ, ನಂಜಯ್ಯ, ವಿಜಯಕುಮಾರ್, ರಮೇಶ್, ರವಿಕುಮಾರ್, ಗ್ರಾ.ಪಂ. ಮಾಜಿ ಸದಸ್ಯ ಚಿಕ್ಕವೆಂಕಟಯ್ಯ, ಮೂಡ್ಲಯ್ಯ ಚರ್ಚೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>