ನಿವೃತ್ತ ಡೆಪ್ಯುಟಿ ರಿಜಿಸ್ಟರ್ ಶಿವಣ್ಣ ಮಾತನಾಡಿ, ಯುವಕರು ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಉತ್ತಮ ವಿದ್ಯೆ ಕಲಿಯಬೇಕು. ಈ ದೇಶದ ತಳ ಸಮುದಾಯ ಬದಲಾವಣೆಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಅಂಬೇಡ್ಕರ್ ತಿಳಿಸಿಕೊಟ್ಟಿದ್ದರು. ಅದರಂತೆ ಎಲ್ಲರೂ ವಿದ್ಯಾವಂತರಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ
ನೀಡಿದರು.