ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಅಪಘಾತದಲ್ಲಿ ಮೃತಪಟ್ಟ ಸಹವರ್ತಿ ಕಳೇಬರದ ಮುಂದೆ ಕಣ್ಣೀರಿಟ್ಟ ನಾಯಿ!

Last Updated 15 ಸೆಪ್ಟೆಂಬರ್ 2019, 4:46 IST
ಅಕ್ಷರ ಗಾತ್ರ

ರಾಮನಗರ: ವಾಹನ ಡಿಕ್ಕಿ ಹೊಡೆದು ಮೃತಪಟ್ಟ ನಾಯಿಯ ಕಳೇಬರದ ಮುಂದೆ ಮತ್ತೊಂದು ನಾಯಿ ರೋಧಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ನಗರದ ಅರ್ಚಕರಹಳ್ಳಿ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೀದಿನಾಯಿಯೊಂದು ವಾಹನಕ್ಕೆ ಸಿಲುಕಿ ಮೃತ ಪಟ್ಟಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಮತ್ತೊಂದು ನಾಯಿಯು ಅದರ ಕಳೇಬರದ ಮುಂದೆ ಕುಳಿತು ರೋಧಿಸುತಿತ್ತು. ಅನೇಕ ಬಾರಿ ತನ್ನ ಸಹವರ್ತಿಯ ದೇಹವನ್ನು ಮುಟ್ಟಿ ಎಬ್ಬಿಸಲು ಯತ್ನಿಸಿತು. ಅದು ಏಳದೇ ಹೋದಾಗ ಬೊಗಳುತ್ತಾ ಕಣ್ಣೀರು ಹಾಕಿತು. ಸುಮಾರು ಎರಡು ಗಂಟೆ ಕಾಲ ಹೀಗೆಯೇ ನಡೆದಿತ್ತು ಎನ್ನಲಾಗಿದೆ.

ಈ ದೃಶ್ಯ ನೋಡಿದ ಸಾರ್ವಜನಿಕರು ಅಪಘಾತಕ್ಕೊಳಗಾದ ನಾಯಿಯ ಅಂತ್ಯಸಂಸ್ಕಾರ ನಡೆಸಿದರು. ಮತ್ತೊಂದು ನಾಯಿಗೆ ಪ್ರೀತಿಯಿಂದ ಊಟವನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT