ನಗರದ ಅರ್ಚಕರಹಳ್ಳಿ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೀದಿನಾಯಿಯೊಂದು ವಾಹನಕ್ಕೆ ಸಿಲುಕಿ ಮೃತ ಪಟ್ಟಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಮತ್ತೊಂದು ನಾಯಿಯು ಅದರ ಕಳೇಬರದ ಮುಂದೆ ಕುಳಿತು ರೋಧಿಸುತಿತ್ತು. ಅನೇಕ ಬಾರಿ ತನ್ನ ಸಹವರ್ತಿಯ ದೇಹವನ್ನು ಮುಟ್ಟಿ ಎಬ್ಬಿಸಲು ಯತ್ನಿಸಿತು. ಅದು ಏಳದೇ ಹೋದಾಗ ಬೊಗಳುತ್ತಾ ಕಣ್ಣೀರು ಹಾಕಿತು. ಸುಮಾರು ಎರಡು ಗಂಟೆ ಕಾಲ ಹೀಗೆಯೇ ನಡೆದಿತ್ತು ಎನ್ನಲಾಗಿದೆ.