‘ನಾರಾಯಣಪುರ ಮತ್ತು ಮಂಗಿಪಾಳ್ಯದ ನಡುವಿನ ರಾಜಕಾಲುವೆ ಒತ್ತುವರಿಯಾಗಿದೆ. ಶಿವಗಂಗಾ ಬೆಟ್ಟದ ತಪ್ಪಲಿನಲ್ಲಿ ಇರುವ ಏಳೆಂಟು ಕೆರೆಗಳು ತುಂಬಿವೆ. ಕೆರೆಗಳ ಕೋಡಿಯ ನೀರು ಈ ಪ್ರದೇಶದ ರಾಜಕಾಲುವೆ ಮೂಲಕ ಹರಿದು ಬರುತ್ತಿದೆ. ನಕ್ಷೆಯಲ್ಲಿ ರಾಜಕಾಲುವೆ ಇದೆ. ಆದರೆ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮಳೆ ನೀರು ಮುಂದೆ ಹರಿದುಹೋಗದಂತೆ ಮುಚ್ಚಲಾಗಿದೆ. ನೀರು ಕಾಲುವೆಯಲ್ಲಿ ಹರಿಯದೆ ರೈತರ ಹೊಲ, ಗದ್ದೆಗಳಿಗೆ ಹರಿದು ಬೆಳೆ ನಷ್ಟವಾಗಿದೆ’ ಎಂದು ಮಂಗಿಪಾಳ್ಯದ ರೈತ ಧನಂಜಯ ಗೌಡ ನೋವು
ತೋಡಿಕೊಂಡರು.