ಏಸುವಿನ ಪ್ರತಿಮೆಯ ಬಲಪಾದದ ಕಲ್ಲಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪ್ರತಿಮೆ ನಿರ್ಮಾಣಕ್ಕಾಗಿ 10 ಎಕರೆ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಜಮೀನು ಖರೀದಿಗೆ ತಗುಲುವ ವೆಚ್ಚವನ್ನು ಸ್ವತಃ ಡಿ.ಕೆ. ಶಿವಕುಮಾರ್ ಭರಿಸಿದ್ದು, ಸರ್ಕಾರಕ್ಕೆ ಹಣ ಪಾವತಿಸಿದ್ದಾರೆ. ಜಮೀನಿನ ದಾಖಲೆಗಳ ಪತ್ರವನ್ನು ಪ್ರತಿಮೆ ನಿರ್ಮಾಣ ಟ್ರಸ್ಟ್ಗೆ ಇದೇ ಸಂದರ್ಭ ಅವರು ಹಸ್ತಾಂತರ ಮಾಡಿದರು. ಪಕ್ಕದಲ್ಲೇ ಇರುವ ಪ್ರತಿಮೆ ಮಾದರಿಯನ್ನು ಅವರು ವೀಕ್ಷಿಸಿದರು. ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಟ್ರಸ್ಟಿನ ಚಿನ್ನರಾಜು ಉಪಸ್ಥಿತರಿದ್ದರು.