ಪುಟಾಣಿ ರಾಯಬಾರಿ ನೇಮಕ
ಸ್ವಚ್ಛತಾ ಕಾರ್ಯವನ್ನು ರಂಗಾಗಿಸುವ ಸಲುವಾಗಿ ನಗರಸಭೆಯು ರಿಯಾಲಿಟಿ ಶೋ ಕಾರ್ಯಕ್ರಮವೊಂದರ ಪುಟಾಣಿ ಗಾಯಕಿ ಜ್ಞಾನವಿಯನ್ನು ರಾಯಬಾರಿಯಾಗಿ ನೇಮಕ ಮಾಡಿಕೊಂಡಿದೆ. ಸದ್ಯದಲ್ಲೇ ಆಕೆ ಪ್ರಚಾರಕ್ಕೆ ಬರಲಿದ್ದಾರೆ.
ಇದಲ್ಲದೆ ನಗರಸಭೆಯು ಅಭಿಯಾನದ ಕುರಿತು ಕರಪತ್ರಗಳನ್ನೂ ಮುದ್ರಿಸಿ ಪ್ರಚಾರ ಮಾಡುತ್ತಿದೆ. ನಿಷೇಧಿಸಲಾದ ಪ್ಲಾಸ್ಟಿಕ್ ವಸ್ತುಗಳು, ಅವುಗಳಿಗೆ ಪರ್ಯಾಯವಾಗಿ ಬಳಸಬಹುದಾದ ವಸ್ತುಗಳ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗಿದೆ.