<p><strong>ಹಾರೋಹಳ್ಳಿ</strong>: ಕಗ್ಗಲಹಳ್ಳಿಯಲ್ಲಿ ಸ್ಮಶಾನವಿಲ್ಲದೆ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಪರದಾಡವಂತಾಯಿತು.</p>.<p>ಕಗ್ಗಲಹಳ್ಳಿ ದಲಿತರು ಹಲವು ವರ್ಷಗಳಿಂದಲೂ ಸ್ಮಶಾನಕ್ಕಾಗಿ ಮನವಿ ಸಲ್ಲಿಸಿದರೂ ತಾಲ್ಲೂಕು ಆಡಳಿತ ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. </p>.<p>ತಹಶೀಲ್ದಾರ್ ಸಿ.ಆರ್.ಶಿವಕುಮಾರ್, ದಲಿತರಿಗೆ ಸ್ಮಶಾನ ಇಲ್ಲದ ವಿಷಯ ತಿಳಿದ ಕೂಡಲೇ ಒಂದು ಎಕರೆ ಜಾಗ ಸ್ಮಶಾನಕ್ಕಾಗಿ ಗುರುತಿಸಿ, ಅಲ್ಲಿಯೇ ಸಂಸ್ಕಾರ ಮಾಡಲು ಸೂಚಿಸಿದರು.</p>.<p>ತಹಶೀಲ್ದಾರ್ ಸೂಚನೆಯಂತೆ ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಈಶ್ವರ್, ‘ನನಗೆ ಮೊದಲೇ ಹೇಳಿದ್ದರೆ ನಿಮ್ಮ ಕೆಲಸ ಆಗುತ್ತಿತ್ತು. ಇದೀಗ ಸರ್ವೆ ನಂ.79ರಲ್ಲಿ ಜಾಗ ಗುರುತಿಸಲಾಗಿದೆ’ ಎಂದರು. ಈ ಮಾತು ಉದ್ಥಟತನದಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದರು. </p>.<p>ಗ್ರಾಮದ ದಲಿತರಿಗೆ ಶಾಶ್ವತವಾಗಿ ಸ್ಮಶಾನಭೂಮಿ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ ಒತ್ತಾಯಿಸಿದ್ದಾರೆ.</p>.<p>ಗ್ರಾಮಸ್ಥರಾದ ಸಂಜೀವ, ವೆಂಕಟರಮಣಯ್ಯ, ಸ್ವಾಮಿ, ಶಿವ, ಗಿರಿದಾಸಯ್ಯ, ಕರಿಯಪ್ಪ, ವೆಂಕಟಾಚಲಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೋಹಳ್ಳಿ</strong>: ಕಗ್ಗಲಹಳ್ಳಿಯಲ್ಲಿ ಸ್ಮಶಾನವಿಲ್ಲದೆ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಪರದಾಡವಂತಾಯಿತು.</p>.<p>ಕಗ್ಗಲಹಳ್ಳಿ ದಲಿತರು ಹಲವು ವರ್ಷಗಳಿಂದಲೂ ಸ್ಮಶಾನಕ್ಕಾಗಿ ಮನವಿ ಸಲ್ಲಿಸಿದರೂ ತಾಲ್ಲೂಕು ಆಡಳಿತ ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. </p>.<p>ತಹಶೀಲ್ದಾರ್ ಸಿ.ಆರ್.ಶಿವಕುಮಾರ್, ದಲಿತರಿಗೆ ಸ್ಮಶಾನ ಇಲ್ಲದ ವಿಷಯ ತಿಳಿದ ಕೂಡಲೇ ಒಂದು ಎಕರೆ ಜಾಗ ಸ್ಮಶಾನಕ್ಕಾಗಿ ಗುರುತಿಸಿ, ಅಲ್ಲಿಯೇ ಸಂಸ್ಕಾರ ಮಾಡಲು ಸೂಚಿಸಿದರು.</p>.<p>ತಹಶೀಲ್ದಾರ್ ಸೂಚನೆಯಂತೆ ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಈಶ್ವರ್, ‘ನನಗೆ ಮೊದಲೇ ಹೇಳಿದ್ದರೆ ನಿಮ್ಮ ಕೆಲಸ ಆಗುತ್ತಿತ್ತು. ಇದೀಗ ಸರ್ವೆ ನಂ.79ರಲ್ಲಿ ಜಾಗ ಗುರುತಿಸಲಾಗಿದೆ’ ಎಂದರು. ಈ ಮಾತು ಉದ್ಥಟತನದಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದರು. </p>.<p>ಗ್ರಾಮದ ದಲಿತರಿಗೆ ಶಾಶ್ವತವಾಗಿ ಸ್ಮಶಾನಭೂಮಿ ಒದಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ ಒತ್ತಾಯಿಸಿದ್ದಾರೆ.</p>.<p>ಗ್ರಾಮಸ್ಥರಾದ ಸಂಜೀವ, ವೆಂಕಟರಮಣಯ್ಯ, ಸ್ವಾಮಿ, ಶಿವ, ಗಿರಿದಾಸಯ್ಯ, ಕರಿಯಪ್ಪ, ವೆಂಕಟಾಚಲಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>