ಸಾವಿರಾರು ಕಾರ್ಯಕರ್ತರೊಂದಿಗೆ ಎಚ್ಡಿಕೆ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಹೆದ್ದಾರಿಯಲ್ಲಿ ಜನಸಾಗರವೇ ನೆರೆದಿತ್ತು. ಎಲ್ಲೆಲ್ಲೂ ಜೆಡಿಎಸ್ ಬಾವುಟಗಳು ರಾರಾಜಿಸುತ್ತಿದ್ದು, ಬೀದಿಗೆಲ್ಲ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಅಲ್ಲಲ್ಲಿ ಪಟಾಕಿಗಳ ಸದ್ದಿಗೆ ಕಾರ್ಯಕರ್ತರೂ ಬೆದರಿದರು. ಕ್ರೇನ್ಗಳ ಮೂಲಕ ಹಾಕಲಾದ ಹಾರಗಳನ್ನು ಸ್ವೀಕರಿಸಿಯೇ ಎಚ್ಡಿಕೆ ದಣಿದರು.