ಎಲವಳ್ಳಿ ಡೇರಿ ಅಧ್ಯಕ್ಷ ವೈ.ಕೆ.ನಾಗರಾಜು ಮಾತನಾಡಿ, ‘ಪ್ರತಿ ಗ್ರಾಮದಲ್ಲೂ ಹಾಲಿನ ಡೇರಿ ಇರುವುದರಿಂದ ರೈತರಿಗೆ ಅನುಕೂಲವಾಗಿದೆ. ಜತೆಗೆ ನಮ್ಮ ತಾಲ್ಲೂಕಿನಲ್ಲಿಯೇ ಹಾಲು ಶೀಥಲೀಕರಣ, ಮೆಗಾ ಡೇರಿ ಇರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ರೈತರು ಹೆಚ್ಚು ಜಿಡ್ಡಿನ ಅಂಶವಿರುವ ಗುಣಮಟ್ಟದ ಹಾಲನ್ನು ಡೇರಿಗೆ ನೀಡಬೇಕು’ ಎಂದು ಸಲಹೆ ನೀಡಿದರು.