‘ಹೆತ್ತವರು ಮಕ್ಕಳ ಭವಿಷ್ಯಕ್ಕೆ ಚಡಪಡಿಸುವ ರೀತಿ, ಮಕ್ಕಳು ಅವರ ಪೋಷಣೆ, ಆರೈಕೆಗೆ ಮುಂದಾಗುವುದಿಲ್ಲ. ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯಂತಹ ಕಾರ್ಯಗಳಿಗೆ ತಂದೆ–ತಾಯಿ ಶಕ್ತಿಮೀರಿ ದುಡಿಯುತ್ತಾರೆ. ಮಕ್ಕಳೇ ಆಸ್ತಿ ಎಂದು ಭಾವಿಸಿ ಕನಸಿನ ಗೋಪುರವನ್ನೇ ಕಟ್ಟಿಕೊಂಡಿರುತ್ತಾರೆ. ಮುಪ್ಪಿನ ಕಾಲದಲ್ಲಿ ನೋಡಿಕೊಳ್ಳದೆ ಮನೆಯಿಂದ ಹೊರಗಟ್ಟುವುದು ದುರಂತ. ಹಾಗಾಗದೇ ಅವರಿಗೆ ನೆರವಾಗಬೇಕು’ ಎಂದು ಸಲಹೆ ನೀಡಿದರು.