<p><strong>ಚನ್ನಪಟ್ಟಣ</strong>: ಇತಿಹಾಸ ಪ್ರಸಿದ್ಧ ನಗರದ ಗರುಡಗಂಬದ ಬೀದಿಯ ಶ್ರೀಲಕ್ಷ್ಮಿನಾರಾಯಣ ಸ್ವಾಮಿಯ ಬ್ರಹ್ಮ ರಥೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.</p>.<p>ಮಾಘ ಹುಣ್ಣಿಮೆಯ ದಿನವಾದ ಇಂದು ದೇವಾಲಯ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಡೆದ ಬ್ರಹ್ಮ ರಥೋತ್ಸವವು ದೇವಾಲಯ ಆವರಣದಿಂದ ಆರಂಭಗೊಂಡು ನಗರದ ಎಂ.ಜಿ. ರಸ್ತೆಯಲ್ಲಿ ಸಾಗಿತು.</p>.<p>ಲಕ್ಷ್ಮಿನಾರಾಯಣ ಸ್ವಾಮಿಯನ್ನು ರಥದಲ್ಲಿ ಕೂರಿಸಿ ಪೂಜಾ ಕುಣಿತ, ಪಟದ ಕುಣಿತ, ಕೋಲಾಟ, ವೀರಗಾಸೆ, ಕರಡಿ ಕುಣಿತ, ತಮಟೆ, ನಗಾರಿ ಹಾಗೂ ಮಂಗಳವಾದ್ಯಗಳ ಸಮೇತ ಮೆರವಣಿಗೆ ಮಾಡಲಾಯಿತು.</p>.<p>ನಗರದ ಅಂಚೆ ಕಚೇರಿ ರಸ್ತೆ, ಜೆ.ಸಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ರಥ ಸಾಗಿತು. ನೂರಾರು ಭಕ್ತರು ರಥಕ್ಕೆ ಪೂಜೆ ಸಲ್ಲಿಸಿದರು.</p>.<p>ಸಮಾಜ ಸೇವಕ ಸಾದತ್ ಉಲ್ಲಾ ಸಕಾಫ್, ಡಿವೈಎಸ್ಪಿ ಕೆ.ಎನ್. ರಮೇಶ್, ದೇವಾಲಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಎಂ.ಜಿ.ಕೆ. ಪ್ರಕಾಶ್, ಎಂ.ಸಿ. ಕರಿಯಪ್ಪ, ಗುಂಡಪ್ಪ, ಚಂದೂಗೌಡ, ರಾಮಚಂದ್ರ, ಸ್ವಾಮಿ, ಶರತ್, ರಘು, ನಾಗೇಂದ್ರ ಪಾಲ್ಗೊಂಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ಇತಿಹಾಸ ಪ್ರಸಿದ್ಧ ನಗರದ ಗರುಡಗಂಬದ ಬೀದಿಯ ಶ್ರೀಲಕ್ಷ್ಮಿನಾರಾಯಣ ಸ್ವಾಮಿಯ ಬ್ರಹ್ಮ ರಥೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.</p>.<p>ಮಾಘ ಹುಣ್ಣಿಮೆಯ ದಿನವಾದ ಇಂದು ದೇವಾಲಯ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಡೆದ ಬ್ರಹ್ಮ ರಥೋತ್ಸವವು ದೇವಾಲಯ ಆವರಣದಿಂದ ಆರಂಭಗೊಂಡು ನಗರದ ಎಂ.ಜಿ. ರಸ್ತೆಯಲ್ಲಿ ಸಾಗಿತು.</p>.<p>ಲಕ್ಷ್ಮಿನಾರಾಯಣ ಸ್ವಾಮಿಯನ್ನು ರಥದಲ್ಲಿ ಕೂರಿಸಿ ಪೂಜಾ ಕುಣಿತ, ಪಟದ ಕುಣಿತ, ಕೋಲಾಟ, ವೀರಗಾಸೆ, ಕರಡಿ ಕುಣಿತ, ತಮಟೆ, ನಗಾರಿ ಹಾಗೂ ಮಂಗಳವಾದ್ಯಗಳ ಸಮೇತ ಮೆರವಣಿಗೆ ಮಾಡಲಾಯಿತು.</p>.<p>ನಗರದ ಅಂಚೆ ಕಚೇರಿ ರಸ್ತೆ, ಜೆ.ಸಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ರಥ ಸಾಗಿತು. ನೂರಾರು ಭಕ್ತರು ರಥಕ್ಕೆ ಪೂಜೆ ಸಲ್ಲಿಸಿದರು.</p>.<p>ಸಮಾಜ ಸೇವಕ ಸಾದತ್ ಉಲ್ಲಾ ಸಕಾಫ್, ಡಿವೈಎಸ್ಪಿ ಕೆ.ಎನ್. ರಮೇಶ್, ದೇವಾಲಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಎಂ.ಜಿ.ಕೆ. ಪ್ರಕಾಶ್, ಎಂ.ಸಿ. ಕರಿಯಪ್ಪ, ಗುಂಡಪ್ಪ, ಚಂದೂಗೌಡ, ರಾಮಚಂದ್ರ, ಸ್ವಾಮಿ, ಶರತ್, ರಘು, ನಾಗೇಂದ್ರ ಪಾಲ್ಗೊಂಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>