ಮೃತಪಟ್ಟವರನ್ನು ಕೆಂಚಯ್ಯ (55) ಎಂದು ಗುರುತಿಸಲಾಗಿದೆ. ಮೃತ ಶರೀರವನ್ನು ಕಾಡುಮೃಗಗಳು ತಿಂದು ಹಾಕಿದ್ದು ಎಡಗಾಲು ಮಾತ್ರ ಉಳಿದಿದೆ. ಸೊಂಟದ ಭಾಗದ ಮೂಳೆಯ ಮೇಲೆ ಹುಳುಗಳು ಬಿದ್ದಿದ್ದು ದುರ್ವಾಸನೆ ಬರುತ್ತಿತ್ತು. ಸೋಮವಾರ ತೋಟಕ್ಕೆ ಹೋದವರು ದುರ್ವಾಸನೆ ಬಂದ ಕಡೆ ಗಮನಿಸಿದಾಗ ಚಿರತೆ ದಾಳಿಯಿಂದ ಮೃತಪಟ್ಟಿರುವ ಬಗ್ಗೆ ತಿಳಿಯಿತು ಎಂದು ಕಾಲೊನಿ ನಿವಾಸಿಗಳು ತಿಳಿಸಿದರು. ಕುದೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.