ಬರೋಬ್ಬರಿ ಎರಡು ತಿಂಗಳ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿದಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬೆಳಿಗ್ಗೆಯಿಂದಲೇ ಡಿಪೊನಿಂದ ಬಸ್ ನಿಲ್ದಾಣದತ್ತ ಬಸ್ಗಳು ಧಾವಿಸಿದವು. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳಾದ ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣಕ್ಕೆ ಬಸ್ಗಳು ಸಂಚಾರ ಕೈಗೊಂಡವು. ನೆರೆಯ ಜಿಲ್ಲೆಗಳಾದ ಬೆಂಗಳೂರು, ಮಂಡ್ಯ ಭಾಗಕ್ಕೂ ಬಸ್ ಸಂಚಾರ ಆರಂಭಿಸಲಾಯಿತು. ಗ್ರಾಮೀಣ ಪ್ರದೇಶಗಳಿಗೆ ಮೊದಲ ದಿನ ಹೆಚ್ಚಿನ ಸೇವೆ ಇರಲಿಲ್ಲ.