<p><strong>ಮಾಗಡಿ</strong>: ಪ್ರತಿ ವರ್ಷದಂತೆ ಮಾಗಡಿ ಹಾಗೂ ಕುದೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರು ಸೋಮವಾರ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹೊರಟರು. ಕಳೆದ 20 ವರ್ಷಗಳಿಂದ ನೂರಾರು ಜನರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳುತ್ತಾರೆ. </p>.<p>ಮಾಗಡಿ ಜಡೇದೇವರ ಮಠದ ಇಮ್ಮಡಿ ಶ್ರೀಬಸವಲಿಂಗ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ದೇವರ ದರ್ಶನ ನೆಪದಲ್ಲಿ ಧನುರ್ ಮಾಸದಲ್ಲಿ ದೇವಾಲಯಗಳಿಗೆ ಕಾಲ್ನಡಿಗೆಯಲ್ಲಿ ತೆರಳುವುದು ಮನಸ್ಸಿನ ಹತೋಟಿಗೆ ನೆರವಾಗುತ್ತದೆ. ಜೀವನ ಸತ್ಯಮಾರ್ಗದ ದರ್ಶನವನ್ನು ತೆರೆದಿಡುತ್ತದೆ ಎಂದರು.</p>.<p>ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವುದು ಒಂದು ಹೊಸ ಅನುಭೂತಿ. ಹೊಸ ಜೀವನ ದರ್ಶನದ ಅನುಭವವಾಗುತ್ತದೆ ಎಂದು ಪಾದಯಾತ್ರಿ ಸಮಿತಿ ಅಧ್ಯಕ್ಷ ರುದ್ರೇಶ್ ಅನುಭವ ಹಂಚಿಕೊಂಡರು.</p>.<p>ಪಾದಯಾತ್ರೆ ವೇಳೆ ಸಹ ಜೀವನ, ಸಹ ಭೋಜನದ ಮಹತ್ವ ಗೊತ್ತಾಗುತ್ತದೆ. ಪ್ರಕೃತಿಯಲ್ಲಿ ದೇವರನ್ನು ಕಾನುತ್ತೇವೆ ಎಂದು ಪಾದಯಾತ್ರೆ ಸಮಿತಿಯ ರಮೇಶ್ ಹಾಗೂ ಮಹೇಶ್ ಮಾತನಾಡಿ ಹೇಳಿದರು.<br /><br /> ಪಾದಯಾತ್ರಿಗಳಾದ ಉಮಾಮಹೇಶ್, ಮಹೇಶ್, ಶೋಭ ರಮೇಶ್, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಲಲಿತಾ, ರೂಪ ಮಂಜುನಾಥ್, ಅನಿತಾ ದಯಾನಂದ್, ವನಜಾಕ್ಷಮ್ಮ, ಭೈರಕ್ಕ, ರೇಣುಕ, ಚಿನ್ನಿರಾಜು, ಮುತ್ತುರಾಜ್, ಹರೀಶ್, ದೇವಿಕ, ಸಂಜಯ್, ಪಾಲನೇತ್ರ, ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಪ್ರತಿ ವರ್ಷದಂತೆ ಮಾಗಡಿ ಹಾಗೂ ಕುದೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರು ಸೋಮವಾರ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹೊರಟರು. ಕಳೆದ 20 ವರ್ಷಗಳಿಂದ ನೂರಾರು ಜನರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳುತ್ತಾರೆ. </p>.<p>ಮಾಗಡಿ ಜಡೇದೇವರ ಮಠದ ಇಮ್ಮಡಿ ಶ್ರೀಬಸವಲಿಂಗ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ದೇವರ ದರ್ಶನ ನೆಪದಲ್ಲಿ ಧನುರ್ ಮಾಸದಲ್ಲಿ ದೇವಾಲಯಗಳಿಗೆ ಕಾಲ್ನಡಿಗೆಯಲ್ಲಿ ತೆರಳುವುದು ಮನಸ್ಸಿನ ಹತೋಟಿಗೆ ನೆರವಾಗುತ್ತದೆ. ಜೀವನ ಸತ್ಯಮಾರ್ಗದ ದರ್ಶನವನ್ನು ತೆರೆದಿಡುತ್ತದೆ ಎಂದರು.</p>.<p>ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವುದು ಒಂದು ಹೊಸ ಅನುಭೂತಿ. ಹೊಸ ಜೀವನ ದರ್ಶನದ ಅನುಭವವಾಗುತ್ತದೆ ಎಂದು ಪಾದಯಾತ್ರಿ ಸಮಿತಿ ಅಧ್ಯಕ್ಷ ರುದ್ರೇಶ್ ಅನುಭವ ಹಂಚಿಕೊಂಡರು.</p>.<p>ಪಾದಯಾತ್ರೆ ವೇಳೆ ಸಹ ಜೀವನ, ಸಹ ಭೋಜನದ ಮಹತ್ವ ಗೊತ್ತಾಗುತ್ತದೆ. ಪ್ರಕೃತಿಯಲ್ಲಿ ದೇವರನ್ನು ಕಾನುತ್ತೇವೆ ಎಂದು ಪಾದಯಾತ್ರೆ ಸಮಿತಿಯ ರಮೇಶ್ ಹಾಗೂ ಮಹೇಶ್ ಮಾತನಾಡಿ ಹೇಳಿದರು.<br /><br /> ಪಾದಯಾತ್ರಿಗಳಾದ ಉಮಾಮಹೇಶ್, ಮಹೇಶ್, ಶೋಭ ರಮೇಶ್, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಲಲಿತಾ, ರೂಪ ಮಂಜುನಾಥ್, ಅನಿತಾ ದಯಾನಂದ್, ವನಜಾಕ್ಷಮ್ಮ, ಭೈರಕ್ಕ, ರೇಣುಕ, ಚಿನ್ನಿರಾಜು, ಮುತ್ತುರಾಜ್, ಹರೀಶ್, ದೇವಿಕ, ಸಂಜಯ್, ಪಾಲನೇತ್ರ, ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>