ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನ ಸಾಕು ನಾಯಿ ಜತೆ ಕಚ್ಚಾಡಿದ ನೆರೆ ಮನೆಯ ನಾಯಿಯನ್ನು ಗುಂಡಿಟ್ಟು ಕೊಂದ

Last Updated 4 ಜನವರಿ 2023, 21:19 IST
ಅಕ್ಷರ ಗಾತ್ರ

ಕುದೂರು (ಮಾಗಡಿ): ತಿಪ್ಪಸಂದ್ರ ಹೋಬಳಿಯ ಸಣ್ಣೇನಹಳ್ಳಿಯ ದಾಖಲೆ ಬಸವನಪಾಳ್ಯದಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿ ಜತೆ ಕಚ್ಚಾಡಿದ ನೆರೆ ಮನೆಯ ನಾಯಿಯನ್ನು ಗುಂಡಿಟ್ಟು ಕೊಂದಿದ್ದಾನೆ.

ಈ ಸಂಬಂಧ ಮೃತ ನಾಯಿ ಮಾಲೀಕ ಕಾಳಯ್ಯ ಅವರು ಬುಧವಾರ ಬೆಳಿಗ್ಗೆ ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನಾಯಿಗೆ ಗುಂಡು ಹಾರಿಸಿ ಕೊಂದ ಹನುಮಂತಯ್ಯ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಕಾವೇರಿ ಪಾಳ್ಯದ ಮಂಜುನಾಥ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಸವನಪಾಳ್ಯದ ಕಾಳಯ್ಯ ಅವರ ನಾಯಿ ಮಂಗಳವಾರ ಹನುಮಂತಯ್ಯ ಅವರ ನಾಯಿಗೆ ಕಚ್ಚಿತ್ತು. ಈ ಸಂಬಂಧ ಕಾಳಯ್ಯ ಮತ್ತು ಹನುಮಂತಯ್ಯ ಕುಟುಂಬ ಸದಸ್ಯರ ಮಧ್ಯೆ ಗಲಾಟೆ ನಡೆದಿತ್ತು. ಗ್ರಾಮಸ್ಥರು ಸಂಧಾನ ನಡೆಸಿ ಗಲಾಟೆ ಶಮನಗೊಳಿಸಿದ್ದರು.

ಮರುದಿನ ಸಂಜೆ ಕಾವೇರಿ ಪಾಳ್ಯದ ಮಂಜುನಾಥ್‌ ಜತೆ ಸೇರಿ ಹನುಮಂತಯ್ಯ ತನ್ನ ಬಳಿಯಿದ್ದ ನಾಡ ಬಂದೂಕಿನಿಂದ ಗುಂಡಿಟ್ಟು ಕಾಳಯ್ಯ ಅವರ ನಾಯಿಯನ್ನು ಕೊಂದು ಹಾಕಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT