ಸೋಮವಾರ ಸಂಜೆ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆದಿದ್ದು, ಅಲ್ಲಿ ಈ ಕುರಿತು ಚರ್ಚೆ ನಡೆಯಿತು. ಅಂತಿಮವಾಗಿ 30ನೇ ವಾರ್ಡಿನ ಸದಸ್ಯೆ ಪಾರ್ವತಮ್ಮ ಹಾಗೂ 31ನೇ ವಾರ್ಡಿನ ಸದಸ್ಯೆ ವಿಜಯಕುಮಾರಿ ಹೆಸರು ಹೆಚ್ಚು ಚರ್ಚೆಗೆ ಬಂದವು. ಆದರೆ, ಯಾರ ಹೆಸರು ಅಂತಿಮಗೊಂಡಿದೆ ಎಂಬ ಗುಟ್ಟನ್ನು ಪಕ್ಷದ ಮುಖಂಡರು ಬಿಟ್ಟುಕೊಟ್ಟಿಲ್ಲ. ಮಂಗಳವಾರ ಬೆಳಿಗ್ಗೆ ಅಭ್ಯರ್ಥಿ ಹೆಸರು ಪ್ರಕಟಿಸುವುದಾಗಿ ಹೇಳಿ ಸಂಸದ ಸುರೇಶ್ ಅಲ್ಲಿಂದ
ನಿರ್ಗಮಿಸಿದರು.