ನಂದಕುಮಾರ್ ಸಾರಿಗೆ ಇಲಾಖೆಯಲ್ಲಿ ಶಾಖಾಧಿಕಾರಿ ಆಗಿದ್ದು, ಅವರನ್ನು ಮಾತೃ ಇಲಾಖೆಯಿಂದ ಪೌರಾಯುಕ್ತ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಈ ಹಿಂದೆ ಇಲ್ಲಿ ಪೌರಾಯುಕ್ತೆ ಆಗಿದ್ದ ಬಿ. ಶುಭಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಅಲ್ಲಿಂದ ಕೆಲವು ದಿನಗಳ ಕಾಲ ಈ ಹುದ್ದೆ ಭರ್ತಿ ಆಗಿರಲಿಲ್ಲ. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತಾವಧಿ ಮುಗಿದು ಎರಡು ವರ್ಷವೇ ಕಳೆದಿದೆ. ಇತ್ತ ಪೂರ್ಣಾವಧಿ ಪೌರಾಯುಕ್ತರು ಇಲ್ಲದೇ ಆಡಳಿತಕ್ಕೆ ಹಿನ್ನೆಡೆಯಾಗಿತ್ತು. ಈ ಹೊತ್ತಿನಲ್ಲೇ ಸರ್ಕಾರ ಹೊಸ ಆಯುಕ್ತರನ್ನು ನೇಮಿಸಿದೆ.