ಮಾಗಡಿ: ಇಲ್ಲಿನ ಮದಲಾರಯ್ಯನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶನಿವಾರ ಚುನಾವಣೆ ನಡೆಯಿತು.
ನಯಾಜ್ ಅಹಮದ್ ಅಧ್ಯಕ್ಷರಾಗಿ, ಬಿ.ಕೆ.ಶಾಂತಮ್ಮ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಪ್ರಸನ್ನ ಕುಮಾರಿ ತಿಳಿಸಿದರು.
ನೂತನ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಡೇರಿಯಲ್ಲಿ 180 ಜನ ಷೇರುದಾರರಿದ್ದಾರೆ. ನಿತ್ಯ 300 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸಂಘದ ನಿರ್ದೇಶಕರೆಲ್ಲರ ಸಹಕಾರದೊಂದಿಗೆ ಸಂಘದ ಬೆಳವಣಿಗೆಗೆ ದುಡಿಯುವುದಾಗಿ ತಿಳಿಸಿದರು.
ನಿರ್ದೇಶಕರಾದ ಅಬ್ದುಲ್ ಖಲೀಲ್, ಗಂಗನರಸಯ್ಯ, ರಾಜಶೇಖರ್, ಮಮತಾ, ಅನ್ಸರ್ಪಾಷಾ, ಜರೀನ್ ತಾಜ್, ಮುಖಂಡರಾದ ರಾಜಣ್ಣ, ಮಹಮದ್ ಮುನೀರ್ ಪಾಷಾ, ಹೊನ್ನಯ್ಯ, ಕೃಷ್ಣಪ್ಪ, ಬಸವರಾಜು, ಕುಮಾರ್, ಅಮ್ಜದ್ ಪಾಷಾ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು. ಸಿಹಿ ವಿತರಿಸಲಾಯಿತು.