ಈಶಾನ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಬುರ್ಲೆ ಮಾತನಾಡಿ "ಕೋವಿಡ್ನಿಂದಾಗಿ ಖಾಸಗಿ ಶಾಲೆ-ಕಾಲೇಜುಗಳ ಶಿಕ್ಷಕರು ಕೂಲಿ ಮಾಡುವ ಸ್ಥಿತಿ ಬಂದಿದೆ. ಶಾಲೆಗಳು ಆರಂಭ ಆಗದೇ ವೇತನ ಸಿಗುತ್ತಿಲ್ಲ. ಸರ್ಕಾರ ಈ ಶಿಕ್ಷಕರಿಗೆ ಕೂಡಲೇ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
"ಶಿಕ್ಷಕ ವರ್ಗದ ಸಮಸ್ಯೆಗಳಿಗೆ ನಿಜವಾಗಿ ಸ್ಪಂದಿಸಿದ್ದು ಎಚ್.ಡಿ. ಕುಮಾರಸ್ವಾಮಿ ಸರ್ಕಾರ. ಆರನೇ ವೇತನ ಆಯೋಗದ ಶಿಫಾರಸು ಜಾರಿ. ಎನ್ಪಿಎಸ್ ರದ್ದು, ಬಾಕಿ ಎಕ್ಸ್ಗ್ರೇಷಿಯಾ ಪಾವತಿ, ಸಹಶಿಕ್ಷಕರಿಗೆ ಬಡ್ತಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಬಲವರ್ಧನೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸಲಿದ್ದೇವೆ’ ಎಂದರು.