ಕಳೆದ ಒಂದು ತಿಂಗಳಿನಿಂದಲೂ ಉಭಯ ಜಿಲ್ಲೆಗಳಲ್ಲಿ ಚುನಾವಣೆ ಕಾವು ಇದೆ. ಮೂರೂ ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳು ಕಣದಲ್ಲಿ ಇದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಪಕ್ಷಗಳ ನಾಯಕರೂ ಸಾಥ್ ನೀಡಿದ್ದು, ಮೂವರೂ ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ. ಕಾಂಗ್ರೆಸ್ನಿಂದ ಎಸ್. ರವಿ, ಬಿಜೆಪಿಯಿಂದ ನಾರಾಯಣ ಸ್ವಾಮಿ ಹಾಗೂ ಜೆಡಿಎಸ್ನಿಂದ ರಮೇಶ ಗೌಡ ಕಣದಲ್ಲಿ ಇದ್ದಾರೆ.