ಕನಕಪುರ: ಕ್ವಿಜ್ ಪ್ರಶ್ನೆಗಳಿಗೆ ಉತ್ತರಿಸಲು ‘ಪ್ರಜಾವಾಣಿ’ ಪತ್ರಿಕೆ ಓದು ಸಾಕಷ್ಟು ಉಪಯುಕ್ತವಾಯಿತು. ಇದರಿಂದ ಜ್ಞಾನ ಹೆಚ್ಚಾಯಿತು ಎಂದು ಕ್ವಿಜ್ ವಿಜೇತ ಶಿಕ್ಷಕ ಮಂಜುನಾಥ್ ತಿಳಿಸಿದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬರುತ್ತಿದ್ದ ನ್ಯೂಸ್ ಕ್ವಿಜ್ನಲ್ಲಿ ಪಾಲ್ಗೊಂಡು ವಿಜೇತರಾಗಿ ಬಹುಮಾನ ಸ್ವೀಕರಿಸಿದ ಅನುಭವ ಹಂಚಿಕೊಂಡರು.
ಅವರು 8ನೇ ತರಗತಿಯಿಂದಲೇ ‘ಪ್ರಜಾವಾಣಿ’ ನಿರಂತರ ಓದುಗರು. ನ್ಯೂಸ್ ಕ್ವಿಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತರಾಗಿದ್ದಾರೆ. ಮಂಜುನಾಥ್ ಅವರಿಗೆ ಸಂಸ್ಥೆಯ ಪ್ರಸಾರಾಂಗ ಪ್ರತಿನಿಧಿ ಮಹೇಶ್ ಮತ್ತು ವಿತರಕ ನರಸಿಂಹಮೂರ್ತಿ ಬಹುಮಾನ ವಿತರಿಸಿದರು.