‘ಈಗಾಗಲೇ ನೂರಾರು ಮರಗಳನ್ನು ಕಡಿಯಲಾಗಿದೆ. ಆದರೂ ಸಂಬಂಧಪಟ್ಟ ಅರಣ್ಯ ಇಲಾಖೆಯವರಾಗಲಿ, ಪಂಚಾಯಿತಿಯವರಾಗಲಿ ಮರ ಕಡಿಯುವುದನ್ನು ತಪ್ಪಿಸಿಲ್ಲ. ರಸ್ತೆ ಬದಿಯಲ್ಲಿ ಸಸಿ ನೆಡುವಾಗ ವಿದ್ಯುತ್ ಮಾರ್ಗ ತಪ್ಪಿಸಿ ನೆಡಬೇಕು. ಕೂಲಿ ನೀಡಿ, ಗುಂಡಿ ತೆಗೆಸಿ, ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸಸಿ ನೆಟ್ಟು, ಹತ್ತಾರು ವರ್ಷ ಬೆಳೆಸಿದ ಮೇಲೆ ಅದನ್ನು ಕಡಿಯುವುದು ಯಾವ ನ್ಯಾಯ?’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.