ರಾಜಗೋಪುರ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದ ಹಿಂದಿನ ದಿನವಾದ ಗುರುವಾರ ಸಂಜೆ 5.20ಕ್ಕೆ ರಾಜಗೋಪುರ ಕಳಸದ ಉತ್ಸವ ಜರುಗಿತು. ಮಹಿಳೆಯರು ಗಂಗಾಪೂಜೆ ಮಾಡಿದರು. ನಂತರ ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಸ್ಥಾಪನೆ ನಡೆಯಿತು. ನಂತರ ವಿವಿಧ ಪೂಜೆಗಳೊಂದಿಗೆ ಹೋಮ ಮಾಡಲಾಯಿತು. ಈ ವೇಳೆ ಜನಪ್ರಿಯ ಕಲಾವಿದ ಡೊಳ್ಳು ಚಂದ್ರ ಅವರ ತಂಡವು ಪೂಜಾ ಕುಣಿತ, ಡೊಳ್ಳು ಕುಣಿತ ಹಾಗೂ ವೀರಗಾಸೆ ಕುಣಿತ ಪ್ರದರ್ಶಿಸಿತು.