<p><strong>ರಾಮನಗರ</strong>: ‘ಮೇಷ್ಟ್ರು ಸಿದ್ಧಲಿಂಗಯ್ಯ ಅವರ ಸಾಹಿತ್ಯವು ಕ್ರಾಂತಿ ಮತ್ತು ಪ್ರೀತಿಯನ್ನು ಧ್ಯಾನಿಸುತ್ತದೆ. ಕಾವ್ಯಕ್ಕೆ ಹೊಸ ದಿಕ್ಕು ತೋರಿದ ಅವರು, ಲೇಖನಿಯನ್ನೇ ಖಡ್ಗ ಮಾಡಿಕೊಂಡು ಚಳವಳಿಯ ಕಾವು ಹೆಚ್ಚಿಸಿದರು. ನೊಂದವರೆಲ್ಲರೂ ನಮ್ಮವರು ಅಂದುಕೊಂಡು ಬರೆದು ಜನಪದವಾದರು. ಕವಿಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ’ ಎಂದು ಸಾಹಿತಿ ಡಾ. ರವಿಕುಮಾರ್ ಬಾಗಿ ಅಭಿಪ್ರಾಯಪಟ್ಟರು.</p>.<p>‘ನಮ್ಮವರು’ ತಂಡವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಜನ ಕವಿ, ನಾಡೋಜ ಡಾ. ಸಿದ್ದಲಿಂಗಯ್ಯ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಲೋಕವು 12ನೇ ಶತಮಾನದಲ್ಲಿ ವಚನ ಸಾಹಿತ್ಯ ಮತ್ತು 70ರ ದಶಕದಲ್ಲಿ ಬಂಡಾಯ ಸಾಹಿತ್ಯದ ಮೂಕ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡಿತು. ಬಂಡಾಯದ ಕಾಲಘಟ್ಟದಲ್ಲಿ ಸಾಹಿತ್ಯ, ರಾಜಕಾರಣ, ಸಾಂಸ್ಕೃತಿಕ ಚಳವಳಿಯ ಕಾವು ಹೆಚ್ಚಿಸಿದವರಲ್ಲಿ ಸಿದ್ದಲಿಂಗಯ್ಯ ಪ್ರಮುಖರು’ ಎಂದರು.</p>.<p>‘ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತಾಗ ಎದುರಾಳಿ ಗುಂಪು ಸಿದ್ದಲಿಂಗಯ್ಯ ಅವರನ್ನು ಮಹಡಿಯಿಂದ ಕೆಳಕ್ಕೆಸೆದಾಗ, ಕೆಳಗಿದ್ದವರು ಅವರನ್ನು ಹಿಡಿದುಕೊಳ್ಳುತ್ತಾರೆ. ಆಗ ಕವಿ ಮರುಹುಟ್ಟು ಪಡೆದರು. ಬೂಸಾ ಚಳವಳಿ ಸಂದರ್ಭದಲ್ಲಿ ಸಚಿವ ಬಸವಲಿಂಗಯ್ಯ ಬೆಂಬಲಕ್ಕೆ ನಿಂತಾಗಲೂ ಮೇಷ್ಟ್ರು ಅವರನ್ನು ಮುಗಿಸುವ ಪ್ರಯತ್ನ ನಡೆದಿತ್ತು. ಆಗಲೂ ಮತ್ತೊಂದು ಹುಟ್ಟು ಸಿಕ್ಕಿತು’ ಎಂದು ನೆನೆದರು. <br><br>‘ಕೇಳದ ಹೊರತು ಏನೂ ದಕ್ಕುವುದಿಲ್ಲ ಎಂಬ ಅರಿವಿದ್ದ ಸಿದ್ದಲಿಂಗಯ್ಯ ಅವರು, ಹೋರಾಟದ ಸಂಗಾತಿಗಳನ್ನು ಒಗ್ಗೂಡಿಸಿ ದಲಿತ ಕ್ರಿಯಾ ಸಮಿತಿ ಕಟ್ಟಿದರು. ಮುಂದೆ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾಗಿ ಬಿ. ಕೃಷ್ಣಪ್ಪ ಅವರನ್ನು ಸಂಚಾಲಕರನ್ನಾಗಿ ಮಾಡಿದರು. ಸಮಿತಿ ಅಂದಿನಿಂದಲೂ ಹೋರಾಟಗಾರರಿಗೆ ಬೆನ್ನೆಲುಬಾಗಿ ನೈತಿಕ ಧೈರ್ಯ ನೀಡುತ್ತಾ ಬಂದಿದೆ’ ಎಂದರು.</p>.<p>‘ಮೇಷ್ಟ್ರು ರಾಜಕಾರಣ ಪ್ರವೇಶಿಸಿದರೂ, ಶೋಷಿತರ ಪರವಾದ ನಿಲುವಿನಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಚಳವಳಿಯಲ್ಲಿ ಭಾಗಿಯಾಗದ ವ್ಯಕ್ತಿ ಸಾಮಾಜಿಕ ಕಸವಾಗುತ್ತಾನೆ ಎಂದು ಎಂ.ಡಿ.ಎನ್ ಹೇಳುತ್ತಾರೆ. ಮಲಗಿದ್ದವರನ್ನು ಎಬ್ಬಿಸಿ, ಅವರಲ್ಲಿ ಹೋರಾಟದ ಕಿಚ್ಚು ಹತ್ತಿಸುವ ಕೆಲಸವನ್ನು ಮೇಷ್ಟ್ರು ಕಾವ್ಯ ಮಾಡಿದೆ. ಇದೇ ಕಾರಣಕ್ಕೆ ಅವರ ಕಾವ್ಯ ಮತ್ತು ಬರವಣಿಗೆ ನಮ್ಮೊಳಗೆ ಸದಾ ಜೀವಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಕವಿಗಳಾದ ಕೂ.ಗಿ. ಗಿರಿಯಪ್ಪ, ಶೈಲಾ ಶ್ರೀನಿವಾಸ್, ಸುಮಂಗಲಾ ಸಿದ್ಧರಾಜು, ಡಾ. ದೇವಮ್ಮಣ್ಣಿ, ಡಾ. ಸುಮಾ ಪ್ರಿಯದರ್ಶಿನಿ, ಡಾ. ಸುಧಾ ಅವರು ಸಿದ್ಧಲಿಂಗಯ್ಯ ಅವರ ಕವಿತೆಗಳನ್ನು ವಾಚಿಸಿದರು. ಶ್ರೀನಿವಾಸ್ ಅವರ ತಂಡ ಸಿದ್ದಲಿಂಗಯ್ಯ ಅವರ ಕಾವ್ಯ ಗಾಯನ ನಡೆಸಿ ಕೊಟ್ಟಿತು.</p>.<p>ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರನ್ ಡಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಉಮಾಶಂಕರ್ ಎಚ್.ಡಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಣೆ ಮಾಡಿದರು. ಡಾ. ನರಸಿಂಹಸ್ವಾಮಿ ಸ್ವಾಗತಿಸಿದರು. ಶಿವು ಗೌಡ ವಂದನಾರ್ಪಣೆ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಡಾ. ಕೃಷ್ಣ, ಡಾ. ಮಾರಣ್ಣ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ ಹಾಗೂ ಇತರರು ಇದ್ದರು.</p>.<p><strong>ಸಿದ್ದಲಿಂಗಯ್ಯ ಅವರ ಸಾಹಿತ್ಯ ಸಾರ್ವಕಾಲಿಕವಾದುದು. ಅವರ ಕಾವ್ಯ ಹೋರಾಟಕ್ಕೆ ಸದಾ ಪ್ರೇರಣೆ ತುಂಬುತ್ತದೆ. ಸಾಹಿತಿಗಳು ಸಾಹಿತ್ಯ ರಚನೆ ಮತ್ತು ಭಾಷಣಕ್ಕೆ ಸೀಮಿತವಾಗದೆ ಅನ್ಯಾಯವನ್ನು ಬಹಿರಂಗವಾಗಿ ಖಂಡಿಸಿ ಸಮಾಜವನ್ನು ಜಾಗೃತಗೊಳಿಸಬೇಕು</strong></p><p><strong> – ಡಾ. ಕೆ. ಶೇಷಾದ್ರಿ ಶಶಿ ಅಧ್ಯಕ್ಷ ನಗರಸಭೆ ರಾಮನಗರ</strong></p>.<p> <strong>‘ಕಾವ್ಯವನ್ನು ಬೀದಿಗೆ ತಂದರು’</strong></p><p>‘ನಿರ್ದಿಷ್ಟ ಚೌಕಟ್ಟಿನಲ್ಲಿ ಬರೆಯುವುದೇ ಕಾವ್ಯ ಎಂಬ ಸೂತ್ರವನ್ನು ಬದಿಗೆ ತಳ್ಳಿದ ಸಿದ್ದಲಿಂಗಯ್ಯ ಕಾವ್ಯವನ್ನು ಬೀದಿಗೆ ತಂದರು. ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ ಎಂಬ ಸಾಲುಗಳ ಮೂಲಕ ತಮ್ಮ ಕಾವ್ಯದಲ್ಲಿ ಶೋಷಿತರು ಮತ್ತು ಸಂಕಟಕ್ಕೊಳಗಾದವರಿಗೆ ದನಿಯಾದರು. ಕಾವ್ಯದಲ್ಲಿ ಪ್ರಕೃತಿ–ಪ್ರೇಮವೇ ಪ್ರಧಾನವಾಗಿದ್ದ ಕಾಲದಲ್ಲಿ ಜನ ಕಾಣತೊಡಗಿದರು. ಮೇಷ್ಟ್ರ ಕಾವ್ಯದಿಂದಾಗಿ ಚಳವಳಿಗೆ ಬಾಯಿ ಬಂತು. ಕಾವ್ಯ ಜನರ ಸ್ವತ್ತಾಗಬೇಕೇ ಹೊರತು ಕವಿಯದ್ದಲ್ಲ. ಅದು ಜನಪದೀಯಗೊಳ್ಳಬೇಕು ಎಂದು ಮೇಷ್ಟ್ರು ಹೇಳುತ್ತಿದ್ದರು’ ಎಂದು ಸಾಹಿತಿ ಡಾ. ಪ್ರಕಾಶ ಮಂಟೇದ ಹೇಳಿದರು. ‘ಕೇರಿಯಿಂದ ಹೊರಟ ಅವರ ಕಾವ್ಯ ಸಾಮಾಜಿಕ ಪ್ರತ್ಯೇಕತೆಯನ್ನು ಒಡೆದು ಮೈತ್ರಿಯ ಸೇತುವಾಗಿದ್ದನ್ನು ಕಾಣಬಹುದಾಗಿದೆ. ಅಂಬೇಡ್ಕರ್ ಆಶಯದಂತೆ ನನ್ನ ಜನ ಆಳುವ ವರ್ಗವಾಗಬೇಕೆಂಬ ಅಂತಃಸತ್ವ ಮೇಷ್ಟ್ರು ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ. ಮೇಲರಿಮೆ–ಕೀಳರಿಮೆ ಇಲ್ಲದೆ ಸಮಾಜವನ್ನು ಮಾನವೀಯಕರಣಗೊಳಿಸುವ ಗುರಿ ಹೊಂದಿದೆ. ದಲಿತ ಸಾಹಿತ್ಯವು ಅಖಂಡ ಮಾನವ ಪ್ರಜ್ಞೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಮೇಷ್ಟ್ರ ಕಾವ್ಯವು ಸಾಹಿತ್ಯಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಎಚ್ಚರಿಕೆ ನೀಡುತ್ತಾ ಹೋಗುತ್ತದೆ. ಆರಂಭದಲ್ಲಿ ಖಡ್ಗವಾಗಲಿ ಕಾವ್ಯ ಎಂದ ಅವರು ಕಡೆಗೆ ಕಾವ್ಯ ಕೊಳಲಾಗಲಿ ಎನ್ನುವ ಮೂಲಕ ಬುದ್ಧನ ಮೈತ್ರಿ ಸಂದೇಶ ಸಾರಿದರು’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ‘ಮೇಷ್ಟ್ರು ಸಿದ್ಧಲಿಂಗಯ್ಯ ಅವರ ಸಾಹಿತ್ಯವು ಕ್ರಾಂತಿ ಮತ್ತು ಪ್ರೀತಿಯನ್ನು ಧ್ಯಾನಿಸುತ್ತದೆ. ಕಾವ್ಯಕ್ಕೆ ಹೊಸ ದಿಕ್ಕು ತೋರಿದ ಅವರು, ಲೇಖನಿಯನ್ನೇ ಖಡ್ಗ ಮಾಡಿಕೊಂಡು ಚಳವಳಿಯ ಕಾವು ಹೆಚ್ಚಿಸಿದರು. ನೊಂದವರೆಲ್ಲರೂ ನಮ್ಮವರು ಅಂದುಕೊಂಡು ಬರೆದು ಜನಪದವಾದರು. ಕವಿಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ’ ಎಂದು ಸಾಹಿತಿ ಡಾ. ರವಿಕುಮಾರ್ ಬಾಗಿ ಅಭಿಪ್ರಾಯಪಟ್ಟರು.</p>.<p>‘ನಮ್ಮವರು’ ತಂಡವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಜನ ಕವಿ, ನಾಡೋಜ ಡಾ. ಸಿದ್ದಲಿಂಗಯ್ಯ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಲೋಕವು 12ನೇ ಶತಮಾನದಲ್ಲಿ ವಚನ ಸಾಹಿತ್ಯ ಮತ್ತು 70ರ ದಶಕದಲ್ಲಿ ಬಂಡಾಯ ಸಾಹಿತ್ಯದ ಮೂಕ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡಿತು. ಬಂಡಾಯದ ಕಾಲಘಟ್ಟದಲ್ಲಿ ಸಾಹಿತ್ಯ, ರಾಜಕಾರಣ, ಸಾಂಸ್ಕೃತಿಕ ಚಳವಳಿಯ ಕಾವು ಹೆಚ್ಚಿಸಿದವರಲ್ಲಿ ಸಿದ್ದಲಿಂಗಯ್ಯ ಪ್ರಮುಖರು’ ಎಂದರು.</p>.<p>‘ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತಾಗ ಎದುರಾಳಿ ಗುಂಪು ಸಿದ್ದಲಿಂಗಯ್ಯ ಅವರನ್ನು ಮಹಡಿಯಿಂದ ಕೆಳಕ್ಕೆಸೆದಾಗ, ಕೆಳಗಿದ್ದವರು ಅವರನ್ನು ಹಿಡಿದುಕೊಳ್ಳುತ್ತಾರೆ. ಆಗ ಕವಿ ಮರುಹುಟ್ಟು ಪಡೆದರು. ಬೂಸಾ ಚಳವಳಿ ಸಂದರ್ಭದಲ್ಲಿ ಸಚಿವ ಬಸವಲಿಂಗಯ್ಯ ಬೆಂಬಲಕ್ಕೆ ನಿಂತಾಗಲೂ ಮೇಷ್ಟ್ರು ಅವರನ್ನು ಮುಗಿಸುವ ಪ್ರಯತ್ನ ನಡೆದಿತ್ತು. ಆಗಲೂ ಮತ್ತೊಂದು ಹುಟ್ಟು ಸಿಕ್ಕಿತು’ ಎಂದು ನೆನೆದರು. <br><br>‘ಕೇಳದ ಹೊರತು ಏನೂ ದಕ್ಕುವುದಿಲ್ಲ ಎಂಬ ಅರಿವಿದ್ದ ಸಿದ್ದಲಿಂಗಯ್ಯ ಅವರು, ಹೋರಾಟದ ಸಂಗಾತಿಗಳನ್ನು ಒಗ್ಗೂಡಿಸಿ ದಲಿತ ಕ್ರಿಯಾ ಸಮಿತಿ ಕಟ್ಟಿದರು. ಮುಂದೆ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾಗಿ ಬಿ. ಕೃಷ್ಣಪ್ಪ ಅವರನ್ನು ಸಂಚಾಲಕರನ್ನಾಗಿ ಮಾಡಿದರು. ಸಮಿತಿ ಅಂದಿನಿಂದಲೂ ಹೋರಾಟಗಾರರಿಗೆ ಬೆನ್ನೆಲುಬಾಗಿ ನೈತಿಕ ಧೈರ್ಯ ನೀಡುತ್ತಾ ಬಂದಿದೆ’ ಎಂದರು.</p>.<p>‘ಮೇಷ್ಟ್ರು ರಾಜಕಾರಣ ಪ್ರವೇಶಿಸಿದರೂ, ಶೋಷಿತರ ಪರವಾದ ನಿಲುವಿನಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಚಳವಳಿಯಲ್ಲಿ ಭಾಗಿಯಾಗದ ವ್ಯಕ್ತಿ ಸಾಮಾಜಿಕ ಕಸವಾಗುತ್ತಾನೆ ಎಂದು ಎಂ.ಡಿ.ಎನ್ ಹೇಳುತ್ತಾರೆ. ಮಲಗಿದ್ದವರನ್ನು ಎಬ್ಬಿಸಿ, ಅವರಲ್ಲಿ ಹೋರಾಟದ ಕಿಚ್ಚು ಹತ್ತಿಸುವ ಕೆಲಸವನ್ನು ಮೇಷ್ಟ್ರು ಕಾವ್ಯ ಮಾಡಿದೆ. ಇದೇ ಕಾರಣಕ್ಕೆ ಅವರ ಕಾವ್ಯ ಮತ್ತು ಬರವಣಿಗೆ ನಮ್ಮೊಳಗೆ ಸದಾ ಜೀವಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಕವಿಗಳಾದ ಕೂ.ಗಿ. ಗಿರಿಯಪ್ಪ, ಶೈಲಾ ಶ್ರೀನಿವಾಸ್, ಸುಮಂಗಲಾ ಸಿದ್ಧರಾಜು, ಡಾ. ದೇವಮ್ಮಣ್ಣಿ, ಡಾ. ಸುಮಾ ಪ್ರಿಯದರ್ಶಿನಿ, ಡಾ. ಸುಧಾ ಅವರು ಸಿದ್ಧಲಿಂಗಯ್ಯ ಅವರ ಕವಿತೆಗಳನ್ನು ವಾಚಿಸಿದರು. ಶ್ರೀನಿವಾಸ್ ಅವರ ತಂಡ ಸಿದ್ದಲಿಂಗಯ್ಯ ಅವರ ಕಾವ್ಯ ಗಾಯನ ನಡೆಸಿ ಕೊಟ್ಟಿತು.</p>.<p>ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರನ್ ಡಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಉಮಾಶಂಕರ್ ಎಚ್.ಡಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಣೆ ಮಾಡಿದರು. ಡಾ. ನರಸಿಂಹಸ್ವಾಮಿ ಸ್ವಾಗತಿಸಿದರು. ಶಿವು ಗೌಡ ವಂದನಾರ್ಪಣೆ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಡಾ. ಕೃಷ್ಣ, ಡಾ. ಮಾರಣ್ಣ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ ಹಾಗೂ ಇತರರು ಇದ್ದರು.</p>.<p><strong>ಸಿದ್ದಲಿಂಗಯ್ಯ ಅವರ ಸಾಹಿತ್ಯ ಸಾರ್ವಕಾಲಿಕವಾದುದು. ಅವರ ಕಾವ್ಯ ಹೋರಾಟಕ್ಕೆ ಸದಾ ಪ್ರೇರಣೆ ತುಂಬುತ್ತದೆ. ಸಾಹಿತಿಗಳು ಸಾಹಿತ್ಯ ರಚನೆ ಮತ್ತು ಭಾಷಣಕ್ಕೆ ಸೀಮಿತವಾಗದೆ ಅನ್ಯಾಯವನ್ನು ಬಹಿರಂಗವಾಗಿ ಖಂಡಿಸಿ ಸಮಾಜವನ್ನು ಜಾಗೃತಗೊಳಿಸಬೇಕು</strong></p><p><strong> – ಡಾ. ಕೆ. ಶೇಷಾದ್ರಿ ಶಶಿ ಅಧ್ಯಕ್ಷ ನಗರಸಭೆ ರಾಮನಗರ</strong></p>.<p> <strong>‘ಕಾವ್ಯವನ್ನು ಬೀದಿಗೆ ತಂದರು’</strong></p><p>‘ನಿರ್ದಿಷ್ಟ ಚೌಕಟ್ಟಿನಲ್ಲಿ ಬರೆಯುವುದೇ ಕಾವ್ಯ ಎಂಬ ಸೂತ್ರವನ್ನು ಬದಿಗೆ ತಳ್ಳಿದ ಸಿದ್ದಲಿಂಗಯ್ಯ ಕಾವ್ಯವನ್ನು ಬೀದಿಗೆ ತಂದರು. ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ ಎಂಬ ಸಾಲುಗಳ ಮೂಲಕ ತಮ್ಮ ಕಾವ್ಯದಲ್ಲಿ ಶೋಷಿತರು ಮತ್ತು ಸಂಕಟಕ್ಕೊಳಗಾದವರಿಗೆ ದನಿಯಾದರು. ಕಾವ್ಯದಲ್ಲಿ ಪ್ರಕೃತಿ–ಪ್ರೇಮವೇ ಪ್ರಧಾನವಾಗಿದ್ದ ಕಾಲದಲ್ಲಿ ಜನ ಕಾಣತೊಡಗಿದರು. ಮೇಷ್ಟ್ರ ಕಾವ್ಯದಿಂದಾಗಿ ಚಳವಳಿಗೆ ಬಾಯಿ ಬಂತು. ಕಾವ್ಯ ಜನರ ಸ್ವತ್ತಾಗಬೇಕೇ ಹೊರತು ಕವಿಯದ್ದಲ್ಲ. ಅದು ಜನಪದೀಯಗೊಳ್ಳಬೇಕು ಎಂದು ಮೇಷ್ಟ್ರು ಹೇಳುತ್ತಿದ್ದರು’ ಎಂದು ಸಾಹಿತಿ ಡಾ. ಪ್ರಕಾಶ ಮಂಟೇದ ಹೇಳಿದರು. ‘ಕೇರಿಯಿಂದ ಹೊರಟ ಅವರ ಕಾವ್ಯ ಸಾಮಾಜಿಕ ಪ್ರತ್ಯೇಕತೆಯನ್ನು ಒಡೆದು ಮೈತ್ರಿಯ ಸೇತುವಾಗಿದ್ದನ್ನು ಕಾಣಬಹುದಾಗಿದೆ. ಅಂಬೇಡ್ಕರ್ ಆಶಯದಂತೆ ನನ್ನ ಜನ ಆಳುವ ವರ್ಗವಾಗಬೇಕೆಂಬ ಅಂತಃಸತ್ವ ಮೇಷ್ಟ್ರು ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ. ಮೇಲರಿಮೆ–ಕೀಳರಿಮೆ ಇಲ್ಲದೆ ಸಮಾಜವನ್ನು ಮಾನವೀಯಕರಣಗೊಳಿಸುವ ಗುರಿ ಹೊಂದಿದೆ. ದಲಿತ ಸಾಹಿತ್ಯವು ಅಖಂಡ ಮಾನವ ಪ್ರಜ್ಞೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಮೇಷ್ಟ್ರ ಕಾವ್ಯವು ಸಾಹಿತ್ಯಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಎಚ್ಚರಿಕೆ ನೀಡುತ್ತಾ ಹೋಗುತ್ತದೆ. ಆರಂಭದಲ್ಲಿ ಖಡ್ಗವಾಗಲಿ ಕಾವ್ಯ ಎಂದ ಅವರು ಕಡೆಗೆ ಕಾವ್ಯ ಕೊಳಲಾಗಲಿ ಎನ್ನುವ ಮೂಲಕ ಬುದ್ಧನ ಮೈತ್ರಿ ಸಂದೇಶ ಸಾರಿದರು’ ಎಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>