ಅಖಂಡ ಕನ್ನಡ ನಾಡಿಗೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದೇವರಾಜ ಅರಸು ಅವರ ಬಗ್ಗೆ ಬರೆದ ‘ಒಡನಾಡಿ ಅರಸು’ ಎಂಬ ಕನ್ನಡ ಪುಸ್ತಕವನ್ನು ಇತ್ತೀಚೆಗೆ ಓದಿದೆ.
ಒಂದು ನಾಡನ್ನು ಹೇಗೆ ಕಟ್ಟಬೇಕೆನ್ನುವುದಕ್ಕೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡಿದ ಅರಸು ಅವರದು ದೇಶಕ್ಕೆ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವ. ಈ ಪುಸ್ತಕ ಓದಿದ ಮೇಲೆ ಅವರ ವ್ಯಕ್ತಿತ್ವದ ಅರಿವು ನನಗಾಯಿತು.
ಮೀಸಲಾತಿ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಿದರು. ಭೂ ಸುಧಾರಣೆ ಮೂಲಕ ಸಂಪತ್ತಿನ ಸಮಾನ ಹಂಚಿಕೆಗೆ ಕಾರಣರಾದ ಅರಸು, ಈ ಶತಮಾನದ ಸ್ಮರಣೀಯ ವ್ಯಕ್ತಿ ಎಂದೇ ಹೇಳಬಹುದು. ಅರಸು ಬದುಕಿನ ಬಗೆಗಿನ ಹತ್ತು ಹಲವು ಆಸಕ್ತಿಕರ ಸಂಗತಿಗಳು ಇದರಲ್ಲಿವೆ.