‘ತಾಲ್ಲೂಕಿನಲ್ಲಿ ಸೋಲಿಗ, ಇರುಗಳಿಗ ಸಮುದಾಯಗಳಿಗೆ ಸರ್ಕಾರಿ ಸವಲತ್ತು ದೊರೆಯುತ್ತಿಲ್ಲ. ನಮ್ಮ ಅಪ್ಪ, ಅಮ್ಮ ಹಗಲು ರಾತ್ರಿ ಹೊಟ್ಟೆಗೆ ಗಂಜಿ ಒದಗಿಸಲು ಊರೂರು ಸುತ್ತುವುದನ್ನು ಕಣ್ಣಾರೆ ಕಂಡು ಸಂಕಟ ಅನುಭವಿಸಿದ್ದೇನೆ. ಪೋಷಕರು ಮತ್ತು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಸಹಕಾರದಿಂದ ಪಟ್ಟ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆತಿದೆ ಎಂದು ಲಾವಣ್ಯ ಸಂತೋಷ ವ್ಯಕ್ತಪಡಿಸಿದರು.