ಇಲ್ಲಿನ ಯಂಬರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, 'ಕೆಚ್ಚಲು ಬಾವು ಆಗಿರುವ ಹಸುಗಳು ಪರಿಪೂರ್ಣ ಗುಣಮುಖವಾಗಬೇಕು. ಹಣದ ಆಸೆಗಾಗಿ ಕೆಲವು ರೋಗ ಪೀಡಿತ ಕೆಚ್ಚಲಿನಿಂದ ಹಾಲು ತಂದು ಡೇರಿಗೆ ಹಾಕುಕುವುದು ಸಲ್ಲದು. ವಾತಾರಣದಲ್ಲಿ ಏರು ಪೇರು, ಮೇವು ನೀಡುವಲ್ಲಿ ವ್ಯತ್ಯಾಸ, ಪಶು ಕೊಟ್ಟಿಗೆ ಸ್ವಚ್ಛತೆ ಇಲ್ಲದಿರುವುದು, ಕೊಳೆತ ಸೋಪ್ಪು, ತರಕಾರಿ ಹಾಕುವುದು, ದುರ್ವಾಸನೆಯುಳ್ಳ ಕಲ್ಲುಗಚ್ಚು ನೀಡುವುದು, ಪಶುಗಳಿಗೆ ವಿವಿಧ ರೋಗಗಳಿಗೆಕಾರಣವಾಗುತ್ತದೆ. ಮಗುವಿನ ಅರೈಕೆಯಂತೆ ಪಶುಗಳ ಜವಾಬ್ದಾರಿ ಇರಬೇಕು. ಪಶುಗಳನ್ನು ಪಾಲಕರು ನಿರ್ಲಕ್ಷ್ಯ ವಹಿಸಬಾರದು’ ಎಂದು ಹೇಳಿದರು.