<p><strong>ಚನ್ನಪಟ್ಟಣ</strong>: ತಾಲ್ಲೂಕಿನ ಸೋಗಾಲಪಾಳ್ಯ ಗ್ರಾಮದಲ್ಲಿ ಹಾಡಹಗಲೇ ಮನೆಯ ಬಾಗಿಲ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರನಡೆದಿದೆ.</p>.<p>ಗ್ರಾಮದ ಚಿಕ್ಕಣ್ಣ ಅವರ ಮಗ ನವೀನ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.</p>.<p>ಮನೆ ಮಾಲೀಕ ನವೀನ್ ತಮ್ಮ ತಾಯಿಯ ಜೊತೆ ಜಮೀನಿನ ಬಳಿ ಹೋಗಿದ್ದರು. ಅವರ ಪತ್ನಿ ತವರಿಗೆ ಹೋಗಿದ್ದರು ಎಂದು ತಿಳಿದು<br />ಬಂದಿದೆ.</p>.<p>ಕಳ್ಳರು ಮನೆಯ ಬೀರುವಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ಓಲೆ, 3 ಗ್ರಾಂ ಚಿನ್ನದ ಕಾಸು, 3 ಗ್ರಾಂ ಚಿನ್ನದ ಮಾಟಿ, 30 ಗ್ರಾಂ ಬ್ರಾಸ್ಲೆಟ್, 5 ಗ್ರಾಂ ಚಿನ್ನದ ಉಂಗುರ, ತಂದೆಗೆ ಸೇರಿದ 15 ಗ್ರಾಂ ಚಿನ್ನದ ಚೈನು, 7 ಗ್ರಾಂ ಉಂಗುರ, ಬಿರುವಿನಲ್ಲಿದ್ದ 15 ಸಾವಿರ ನಗದು ದೋಚಿದ್ದಾರೆ.</p>.<p>ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ತಾಲ್ಲೂಕಿನ ಸೋಗಾಲಪಾಳ್ಯ ಗ್ರಾಮದಲ್ಲಿ ಹಾಡಹಗಲೇ ಮನೆಯ ಬಾಗಿಲ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರನಡೆದಿದೆ.</p>.<p>ಗ್ರಾಮದ ಚಿಕ್ಕಣ್ಣ ಅವರ ಮಗ ನವೀನ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.</p>.<p>ಮನೆ ಮಾಲೀಕ ನವೀನ್ ತಮ್ಮ ತಾಯಿಯ ಜೊತೆ ಜಮೀನಿನ ಬಳಿ ಹೋಗಿದ್ದರು. ಅವರ ಪತ್ನಿ ತವರಿಗೆ ಹೋಗಿದ್ದರು ಎಂದು ತಿಳಿದು<br />ಬಂದಿದೆ.</p>.<p>ಕಳ್ಳರು ಮನೆಯ ಬೀರುವಿನಲ್ಲಿದ್ದ 30 ಗ್ರಾಂ ಮಾಂಗಲ್ಯ ಸರ, 8 ಗ್ರಾಂ ಓಲೆ, 3 ಗ್ರಾಂ ಚಿನ್ನದ ಕಾಸು, 3 ಗ್ರಾಂ ಚಿನ್ನದ ಮಾಟಿ, 30 ಗ್ರಾಂ ಬ್ರಾಸ್ಲೆಟ್, 5 ಗ್ರಾಂ ಚಿನ್ನದ ಉಂಗುರ, ತಂದೆಗೆ ಸೇರಿದ 15 ಗ್ರಾಂ ಚಿನ್ನದ ಚೈನು, 7 ಗ್ರಾಂ ಉಂಗುರ, ಬಿರುವಿನಲ್ಲಿದ್ದ 15 ಸಾವಿರ ನಗದು ದೋಚಿದ್ದಾರೆ.</p>.<p>ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>