ದೇಸಿ ಗಾರೆಗಚ್ಚು ಬಳಸಿ ಕೋಟೆಗಳ ನಿರ್ಮಾಣ ಪ್ರತಿಯೊಬ್ಬ ಪಾಳೇಗಾರರ ವಂಶದ ಗೌರವ ಸಂಕೇತವಾಗಿತ್ತು. ಅರ್ಕಾವತಿ ಮತ್ತು ಕಣ್ವ, ಕುಮುದ್ವತಿ ನದಿಗಳ ಸಂಗಮದ ಪುಣ್ಯಭೂಮಿ ಸಾವನದುರ್ಗ. ಸಂಪಾಜೆರಾಯ ಮತ್ತು ಸಾವಂದರಾಯ ಸಹೋದರರು ಮಣ್ಣಿನ ಏಳುಸುತ್ತಿನ ಕೋಟೆ ನಿರ್ಮಿಸಿಕೊಂಡು ಪ್ರಜೆಗಳ ರಕ್ಷಕರಾಗಿ ಇಲ್ಲಿ ಆಳ್ವಿಕೆ ನಡೆಸಿದರು ಎಂಬುದು ಚೆರಿತ್ರೆ ದಾಖಲೆಗಳಲ್ಲಿ ಉಲ್ಲೇಖವಿದೆ. ಸಂಪಾಜೆರಾಯನೆಂಬ ಪಾಳೇಗಾರ ಸಾನವದುರ್ಗದ ತಪ್ಪಲಿನಲ್ಲಿ ಗಿರಿದುರ್ಗ ನಿರ್ಮಿಸಿಕೊಂಡು, ರಾಮದುರ್ಗ, ಹುತ್ರಿದುರ್ಗ, ಹುಲಿಯೂರುದುರ್ಗ, ಹುಲಿಕಲ್, ಕುಣಿಗಲ್ ದುರ್ಗ,ಮಧುಗಿರಿ, ಶ್ವಾರಗಿರಿ, ಮಿಡಿಗೇಶಿ ಪಾಳೇಗಾರರನ್ನು ಸದೆಬಡಿದು ಪ್ರಜಾಚಿಂತಕನಾಗಿಯೂ, ದೈವಭಕ್ತನಾಗಿಯೂ ಆಳ್ವಿಕೆ ನಡೆಸಿದ.