<p><strong>ಮಾಗಡಿ (ಕುದೂರು):</strong> ಕೆಂಪೇಗೌಡರು ನಿರ್ಮಿಸಿದ ಹೊಸಹಳ್ಳಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಹಿಂಭಾಗದ ಬೃಹತ್ ಚಕ್ರ ಬಸವಣ್ಣ ವಿಗ್ರಹವನ್ನು ನಿಧಿ ಆಸೆಗಾಗಿ ಅರ್ಧ ಅಡಿಯಷ್ಟು ಪಕ್ಕಕ್ಕೆ ಸರಿಸಲಾಗಿದೆ.</p>.<p>ಮಂಗಳವಾರ ರಾತ್ರಿ ವಿಗ್ರಹದ ತಳಭಾಗವನ್ನು ಹಾರೆ ಕೋಲಿನಿಂದ ಅಗೆದಿರುವ ನಿಧಿಕಳ್ಳರು ವಿಗ್ರಹವನ್ನು ಪಕ್ಕಕ್ಕೆ ಸರಿಸಿ, ಹಾಗೆ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>ಪ್ರತಿ ವರ್ಷದಂತೆ ಹೊಸಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ಮಳೆಗಾಗಿ ಬಸವಣ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದರು.ದೇವಸ್ಥಾನದಲ್ಲಿ ಈ ಹಿಂದೆ ಕಳ್ಳತನ ಆಗಿತ್ತು. ದೇವಸ್ಥಾನದ ಮೂಲ ಗೋಪುರವನ್ನು ಕಳ್ಳರು ಒಡೆದು ಹಾಕಿದ್ದರು. </p>.<p>ಸೋಮೇಶ್ವರ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದು ಇಂತಹ ಘಟನೆ ನಡೆದರೂ ಇಲಾಖೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾಚ್ಯವಸ್ತು ಇಲಾಖೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ಗ್ರಾಮಸ್ಥರು ಪ್ರತಿ ವರ್ಷ ಭರಣಿ ಮಳೆಗಾಗಿ ಬಸವಣ್ಣನಿಗೆ ಆರತಿ ಪೂಜೆ ಮಾಡುತ್ತಾರೆ. ರಾಜ್ಯ ಪ್ರಾಚ್ಯವಸ್ತು ಇಲಾಖೆ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಮತ್ತು ನಿಧಿ ಕಳ್ಳರನ್ನು ಬಂಧಿಸಬೇಕು</p>.<p>-ಶಿವರಾಜುಹೊಸಹಳ್ಳಿ ಗ್ರಾಮಸ್ಥ</p>.<p>ನಿಧಿ ಕಳ್ಳರು ಚಕ್ರ ಬಸವಣ್ಣ ವಿಗ್ರಹಕ್ಕೆ ಧಕ್ಕೆ ಮಾಡಿಲ್ಲ. ಪಕ್ಕಕ್ಕೆ ಸರಿಸಿದ್ದಾರೆ. ಬಸವಣ್ಣ ವಿಗ್ರಹಕ್ಕೆ ಧಕ್ಕೆಯಾಗದ ಆಗದ ಕಾರಣ ಮತ್ತೆ ಶಾಸ್ತ್ರೋಕ್ತವಾಗಿ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಲಾಗುವುದು</p>.<p>-ರಂಗಣ್ಣ ಗ್ರಾ.ಪಂ.ಮಾಜಿ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ (ಕುದೂರು):</strong> ಕೆಂಪೇಗೌಡರು ನಿರ್ಮಿಸಿದ ಹೊಸಹಳ್ಳಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಹಿಂಭಾಗದ ಬೃಹತ್ ಚಕ್ರ ಬಸವಣ್ಣ ವಿಗ್ರಹವನ್ನು ನಿಧಿ ಆಸೆಗಾಗಿ ಅರ್ಧ ಅಡಿಯಷ್ಟು ಪಕ್ಕಕ್ಕೆ ಸರಿಸಲಾಗಿದೆ.</p>.<p>ಮಂಗಳವಾರ ರಾತ್ರಿ ವಿಗ್ರಹದ ತಳಭಾಗವನ್ನು ಹಾರೆ ಕೋಲಿನಿಂದ ಅಗೆದಿರುವ ನಿಧಿಕಳ್ಳರು ವಿಗ್ರಹವನ್ನು ಪಕ್ಕಕ್ಕೆ ಸರಿಸಿ, ಹಾಗೆ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>ಪ್ರತಿ ವರ್ಷದಂತೆ ಹೊಸಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ಮಳೆಗಾಗಿ ಬಸವಣ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದರು.ದೇವಸ್ಥಾನದಲ್ಲಿ ಈ ಹಿಂದೆ ಕಳ್ಳತನ ಆಗಿತ್ತು. ದೇವಸ್ಥಾನದ ಮೂಲ ಗೋಪುರವನ್ನು ಕಳ್ಳರು ಒಡೆದು ಹಾಕಿದ್ದರು. </p>.<p>ಸೋಮೇಶ್ವರ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದು ಇಂತಹ ಘಟನೆ ನಡೆದರೂ ಇಲಾಖೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾಚ್ಯವಸ್ತು ಇಲಾಖೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<p>ಗ್ರಾಮಸ್ಥರು ಪ್ರತಿ ವರ್ಷ ಭರಣಿ ಮಳೆಗಾಗಿ ಬಸವಣ್ಣನಿಗೆ ಆರತಿ ಪೂಜೆ ಮಾಡುತ್ತಾರೆ. ರಾಜ್ಯ ಪ್ರಾಚ್ಯವಸ್ತು ಇಲಾಖೆ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಮತ್ತು ನಿಧಿ ಕಳ್ಳರನ್ನು ಬಂಧಿಸಬೇಕು</p>.<p>-ಶಿವರಾಜುಹೊಸಹಳ್ಳಿ ಗ್ರಾಮಸ್ಥ</p>.<p>ನಿಧಿ ಕಳ್ಳರು ಚಕ್ರ ಬಸವಣ್ಣ ವಿಗ್ರಹಕ್ಕೆ ಧಕ್ಕೆ ಮಾಡಿಲ್ಲ. ಪಕ್ಕಕ್ಕೆ ಸರಿಸಿದ್ದಾರೆ. ಬಸವಣ್ಣ ವಿಗ್ರಹಕ್ಕೆ ಧಕ್ಕೆಯಾಗದ ಆಗದ ಕಾರಣ ಮತ್ತೆ ಶಾಸ್ತ್ರೋಕ್ತವಾಗಿ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಲಾಗುವುದು</p>.<p>-ರಂಗಣ್ಣ ಗ್ರಾ.ಪಂ.ಮಾಜಿ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>