ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಿಚಿತ ಯುವಕ ಆತ್ಮಹತ್ಯೆ

Last Updated 19 ಸೆಪ್ಟೆಂಬರ್ 2021, 5:09 IST
ಅಕ್ಷರ ಗಾತ್ರ

ಚನ್ನಪಟ್ಟಣ: ಅಪರಿಚಿತ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ರಾಮಮ್ಮನ ಕೆರೆ ಏರಿ ಬ್ರಿಡ್ಜ್ ಕೆಳಗಿನ ರೈಲ್ವೆ ಹಳಿಯ ಮೇಲೆ ಶನಿವಾರ ನಡೆದಿದೆ.

ಸುಮಾರು 25 ರಿಂದ 30 ವರ್ಷ ವಯಸ್ಸಿನ ಈತ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಒಂದು ಬ್ಯಾಗ್ ಇದ್ದು ಅದರಲ್ಲಿ ಆತನ ವಿಳಾಸಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಇಲ್ಲ. ರೈಲಿಗೆ ಅಡ್ಡಲಾಗಿ ಮಲಗಿದ್ದ ಪರಿಣಾಮ ಆತನ ತಲೆ ಹಾರಿ ಹೋಗಿದ್ದು, ಕಾಲುಗಳು ಕತ್ತರಿಸಿವೆ. ತಲೆ ಹಾಗೂ ದೇಹ ಎರಡು ಭಾಗಗಳಾಗಿವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಸುಮಾರು 5.6 ಅಡಿ ಎತ್ತರ, ಕಪ್ಪುಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಈತನ ಎಡಗೈ ಭುಜದ ಮೇಲೆ ಹಿಂದಿಯಲ್ಲಿ ಜೈ ಶ್ರೀರಾಮ್ ಅಕ್ಷರ ಹಾಗೂ ಗರುಡ ಚಿತ್ರವಿದೆ. ಬಲಗೈ ತೋಳಿನ ಮೇಲೆ ಗದೆ ಹಾಗೂ ಚೈನ್ ಡಿಸೈನ್ ಅಚ್ಚೆ ಗುರುತು ಇದೆ. ಈತನ ಮೈಮೇಲೆ ಕಡುನೀಲಿ ಬಣ್ಣದ ಟೀ ಶರ್ಟ್, ಕಪ್ಪುಬಣ್ಣದ ತುಂಬುತೋಳಿನ ಜರ್ಕಿನ್, ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಇದೆ.

ಪಟ್ಟಣದ ರೈಲ್ವೆ ಪೊಲೀಸ್ ಹೊರ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ರೈಲ್ವೆ ಕಂಟ್ರೋಲ್ ರೂಂ ದೂ.ಸಂ. 080 22871291 ಮೊಬೈಲ್ 94808 02113 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT