ಯುವತಿಯನ್ನು ಹತ್ಯೆ ಮಾಡಿ ಗ್ರಾಮದ ಜಮೀನಿನೊಂದರಲ್ಲಿ ಗುಂಡಿ ತೆಗೆದು ಹೂಳಲಾಗಿತ್ತು. ಸಮೀಪದಲ್ಲಿ ಕಂಡು ಬಂದ ರಕ್ತದ ಕಲೆಗಳ ಜಾಡು ಹಿಡಿದು ಪರಿಶೀಲಿಸಿದಾಗ ಗುಂಡಿಯ ಒಳಗೆ ಶವ ದೊರಕಿತು. ಯುವತಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ದೇಹದ ಅಲ್ಲಲ್ಲಿಯೂ ಗಾಯದ ಗುರುತುಗಳಿವೆ. ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.