ಘಟನೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಶ್ರೀನಿವಾಸಯ್ಯ ಅವರು ಕಚೇರಿಯ ಪ್ರಥಮದರ್ಜೆ ಸಹಾಯಕ ಎನ್.ಮಂಜುನಾಥ್ ಮೂಲಕ ನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ (ಹಿಂದೆ ಆರ್ಟಿಒ ಕಚೇರಿಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು), ಮೋಹನ್, ಅಲಸೆ ರಾಜು, ಲಕ್ಷ್ಮಣ್, ಜಾವೀದ್, ಮುನಾಫ್ ಹಾಗೂ ಸಿರಾಜ್ ವಿರುದ್ಧ ಸೋಮವಾರ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.