‘ಮೈದಾನದ ಜಾಗ ಕಂದಾಯ ಇಲಾಖೆ
ಒಡೆತನದಲ್ಲಿದೆ. ಹೀಗಾಗಿ, ಗಣೇಶೋತ್ಸವ ಆಚರಣೆಗೆ ಕಂದಾಯ ಇಲಾಖೆಯೇ ಅನುಮತಿ ನೀಡಬೇಕು. ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಸೇರಿದಂತೆ ಮೂರು ಸಂಘಟನೆಗಳು, ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ನಗರ ಜಿಲ್ಲಾಧಿಕಾರಿ ಅವರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿವೆ. ಅನುಮತಿ ನೀಡುವುದು ಅಥವಾ ನಿರಾಕರಿಸುವುದು ಕಂದಾಯ ಇಲಾಖೆಗೆ ಬಿಟ್ಟಿದ್ದು. ಪೊಲೀಸ್ ಇಲಾಖೆಯಿಂದ ಮೈದಾನದ ಭದ್ರತೆಗೆ ಒತ್ತು ನೀಡಲಾಗಿದೆ’ ಎಂದೂ ಹೇಳಿದರು.