<p><strong>ಶಿವಮೊಗ್ಗ</strong>: ನಿಸರ್ಗದ ಜಾಡಮಾಲಿ ಎಂದೇ ಜನಜನಿತವಾಗಿರುವ ಕತ್ತೆ ಕಿರುಬಗಳು (Hyna) ಇಲ್ಲಿನ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ನೂತನ ಅತಿಥಿಗಳಾಗಿವೆ. ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ.</p>.<p>ಮೈಸೂರು ಮೃಗಾಲಯದಿಂದ ಒಂದು ಗಂಡು, ಮೂರು ಹೆಣ್ಣು ಸೇರಿದಂತೆ ನಾಲ್ಕು ಕತ್ತೆ ಕಿರುಬಗಳನ್ನು ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಕರೆತರಲಾಯಿತು. ವನ್ಯಜೀವಿ ವೈದ್ಯ ಡಾ.ಮುರಳಿಮನೋಹರ್ ನೇತೃತ್ವದ ತಂಡ ಈ ಕತ್ತೆ ಕಿರುಬಗಳನ್ನು ಮೃಗಾಲಯಕ್ಕೆ ಕರೆತಂದಿತು.</p>.<p>ಈ ಮೊದಲು ಹುಲಿ–ಸಿಂಹಧಾಮದಲ್ಲಿ ಜೋಡಿ ಕತ್ತೆ ಕಿರುಬ ಇದ್ದವು. ಅದರಲ್ಲಿ ಗಂಡು ಸಾವಿಗೀಡಾಗಿದೆ. ಹೆಣ್ಣು ಮಾತ್ರ ಇದೆ. ಇದರಿಂದ ಅವುಗಳ ವಂಶಾಭಿವೃದ್ಧಿಗೆ ತೊಂದರೆ ಆಗಿತ್ತು.</p>.<p>‘ಪ್ರಾಣಿಗಳ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ ಈ ನಾಲ್ಕು ಕತ್ತೆಕಿರುಬಗಳನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಈ ಗಜರಾಜ ಕ್ಯಾಂಪಿನಲ್ಲೇ ದೈತ್ಯದೇಹಿ! </strong></p><p>ಹಾಸನ ಜಿಲ್ಲೆ ಆಲ್ದೂರು ಬಳಿ ಮೂರು ತಿಂಗಳ ಹಿಂದೆ ಕಾಫಿ ತೋಟದಲ್ಲಿ ಸೆರೆಹಿಡಿದ ಸಲಗ ಈಗ ಸಕ್ರೆಬೈಲು ಕ್ಯಾಂಪಿನಲ್ಲಿರುವ ಗಜಪಡೆಯಲ್ಲೇ ದೈತ್ಯದೇಹಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಈ ಸಲಗನ ಸೇರ್ಪಡೆಯಿಂದ ಸದ್ಯ ಕ್ಯಾಂಪಿನಲ್ಲಿರುವ ಆನೆಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಅದರಲ್ಲಿ ನಾಲ್ಕು ಹೆಣ್ಣಾನೆ ಇವೆ. </p><p><strong>ತಪ್ಪು ಗ್ರಹಿಕೆಯಿಂದ ಸೆರೆ:</strong> ಆಲ್ದೂರು ಭಾಗದಲ್ಲಿ ಜನರು ಹಾಗೂ ಬೆಳೆಗಳ ಮೇಲೆ ಬೇರೊಂದು ಆನೆ ದಾಳಿ ಮಾಡುತ್ತಿತ್ತು. ಜನರಿಗೆ ಉಪಟಳ ಕೊಡುತ್ತಿದ್ದ ಆ ಆನೆಯನ್ನು ಹುಡುಕಿಕೊಂಡು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ಗ್ರಹಿಕೆಯಿಂದ ಈ ಸಲಗವನ್ನು ಹಿಡಿದಿದ್ದರು ಎಂದು ತಿಳಿದುಬಂದಿದೆ. ಸೆರೆ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ 30 ವರ್ಷದ ಈ ಆನೆಗೆ ಇಲ್ಲಿ ಚಿಕಿತ್ಸೆ ಕೂಡ ನೀಡಲಾಗಿದೆ. ತಲಾ ನಾಲ್ಕೂವರೆ ಅಡಿ ಉದ್ದದ ದಂತಗಳನ್ನು ಹೊಂದಿರುವ ಈ ಆನೆಯನ್ನು ಸಕ್ರೆಬೈಲು ಕ್ಯಾಂಪಿನಲ್ಲಿ ಪಳಗಿಸುವ ಕಾರ್ಯ ಡಾ.ವಿನಯ್ ನೇತೃತ್ವದಲ್ಲಿ ನಡೆದಿದೆ. ಶೀಘ್ರ ಈ ಆನೆಗೂ ಹೆಸರು ಇಡುವ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. </p><p>ಹೊನ್ನಾಳಿ ಬಳಿ ಅರೆವಳಿಕೆ ಮದ್ದು ನೀಡುವಾಗ ಡಾ.ವಿನಯ್ ಮೇಲೆ ದಾಳಿ ನಡೆಸಿದ್ದ ಆನೆ ‘ಅಭಿಮನ್ಯು’ ಈಗ ಸಕ್ರೆಬೈಲು ಕ್ಯಾಂಪಿನಲ್ಲಿ ಪ್ರವಾಸಿಗರ ನೆಚ್ಚಿನ ಆನೆ. ಪಳಗಿದ ನಂತರ ಜನಸ್ನೇಹಿಯಾಗಿ ಈ ಆನೆ ಬದಲಾಗಿದೆ. ಸವಾರಿ ವೇಳೆ ಜನರ ಹೊತ್ತು ಸಾಗುವಾಗ ವಿಧೇಯದಿಂದ ವರ್ತಿಸುವ ಅಭಿಮನ್ಯು ಅಲ್ಲಿನ ಕಾವಾಡಿ ಮಾವುತರ ನೆಚ್ಚಿನ ಆನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ನಿಸರ್ಗದ ಜಾಡಮಾಲಿ ಎಂದೇ ಜನಜನಿತವಾಗಿರುವ ಕತ್ತೆ ಕಿರುಬಗಳು (Hyna) ಇಲ್ಲಿನ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ನೂತನ ಅತಿಥಿಗಳಾಗಿವೆ. ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ.</p>.<p>ಮೈಸೂರು ಮೃಗಾಲಯದಿಂದ ಒಂದು ಗಂಡು, ಮೂರು ಹೆಣ್ಣು ಸೇರಿದಂತೆ ನಾಲ್ಕು ಕತ್ತೆ ಕಿರುಬಗಳನ್ನು ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಕರೆತರಲಾಯಿತು. ವನ್ಯಜೀವಿ ವೈದ್ಯ ಡಾ.ಮುರಳಿಮನೋಹರ್ ನೇತೃತ್ವದ ತಂಡ ಈ ಕತ್ತೆ ಕಿರುಬಗಳನ್ನು ಮೃಗಾಲಯಕ್ಕೆ ಕರೆತಂದಿತು.</p>.<p>ಈ ಮೊದಲು ಹುಲಿ–ಸಿಂಹಧಾಮದಲ್ಲಿ ಜೋಡಿ ಕತ್ತೆ ಕಿರುಬ ಇದ್ದವು. ಅದರಲ್ಲಿ ಗಂಡು ಸಾವಿಗೀಡಾಗಿದೆ. ಹೆಣ್ಣು ಮಾತ್ರ ಇದೆ. ಇದರಿಂದ ಅವುಗಳ ವಂಶಾಭಿವೃದ್ಧಿಗೆ ತೊಂದರೆ ಆಗಿತ್ತು.</p>.<p>‘ಪ್ರಾಣಿಗಳ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ ಈ ನಾಲ್ಕು ಕತ್ತೆಕಿರುಬಗಳನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಈ ಗಜರಾಜ ಕ್ಯಾಂಪಿನಲ್ಲೇ ದೈತ್ಯದೇಹಿ! </strong></p><p>ಹಾಸನ ಜಿಲ್ಲೆ ಆಲ್ದೂರು ಬಳಿ ಮೂರು ತಿಂಗಳ ಹಿಂದೆ ಕಾಫಿ ತೋಟದಲ್ಲಿ ಸೆರೆಹಿಡಿದ ಸಲಗ ಈಗ ಸಕ್ರೆಬೈಲು ಕ್ಯಾಂಪಿನಲ್ಲಿರುವ ಗಜಪಡೆಯಲ್ಲೇ ದೈತ್ಯದೇಹಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಈ ಸಲಗನ ಸೇರ್ಪಡೆಯಿಂದ ಸದ್ಯ ಕ್ಯಾಂಪಿನಲ್ಲಿರುವ ಆನೆಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಅದರಲ್ಲಿ ನಾಲ್ಕು ಹೆಣ್ಣಾನೆ ಇವೆ. </p><p><strong>ತಪ್ಪು ಗ್ರಹಿಕೆಯಿಂದ ಸೆರೆ:</strong> ಆಲ್ದೂರು ಭಾಗದಲ್ಲಿ ಜನರು ಹಾಗೂ ಬೆಳೆಗಳ ಮೇಲೆ ಬೇರೊಂದು ಆನೆ ದಾಳಿ ಮಾಡುತ್ತಿತ್ತು. ಜನರಿಗೆ ಉಪಟಳ ಕೊಡುತ್ತಿದ್ದ ಆ ಆನೆಯನ್ನು ಹುಡುಕಿಕೊಂಡು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ಗ್ರಹಿಕೆಯಿಂದ ಈ ಸಲಗವನ್ನು ಹಿಡಿದಿದ್ದರು ಎಂದು ತಿಳಿದುಬಂದಿದೆ. ಸೆರೆ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ 30 ವರ್ಷದ ಈ ಆನೆಗೆ ಇಲ್ಲಿ ಚಿಕಿತ್ಸೆ ಕೂಡ ನೀಡಲಾಗಿದೆ. ತಲಾ ನಾಲ್ಕೂವರೆ ಅಡಿ ಉದ್ದದ ದಂತಗಳನ್ನು ಹೊಂದಿರುವ ಈ ಆನೆಯನ್ನು ಸಕ್ರೆಬೈಲು ಕ್ಯಾಂಪಿನಲ್ಲಿ ಪಳಗಿಸುವ ಕಾರ್ಯ ಡಾ.ವಿನಯ್ ನೇತೃತ್ವದಲ್ಲಿ ನಡೆದಿದೆ. ಶೀಘ್ರ ಈ ಆನೆಗೂ ಹೆಸರು ಇಡುವ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. </p><p>ಹೊನ್ನಾಳಿ ಬಳಿ ಅರೆವಳಿಕೆ ಮದ್ದು ನೀಡುವಾಗ ಡಾ.ವಿನಯ್ ಮೇಲೆ ದಾಳಿ ನಡೆಸಿದ್ದ ಆನೆ ‘ಅಭಿಮನ್ಯು’ ಈಗ ಸಕ್ರೆಬೈಲು ಕ್ಯಾಂಪಿನಲ್ಲಿ ಪ್ರವಾಸಿಗರ ನೆಚ್ಚಿನ ಆನೆ. ಪಳಗಿದ ನಂತರ ಜನಸ್ನೇಹಿಯಾಗಿ ಈ ಆನೆ ಬದಲಾಗಿದೆ. ಸವಾರಿ ವೇಳೆ ಜನರ ಹೊತ್ತು ಸಾಗುವಾಗ ವಿಧೇಯದಿಂದ ವರ್ತಿಸುವ ಅಭಿಮನ್ಯು ಅಲ್ಲಿನ ಕಾವಾಡಿ ಮಾವುತರ ನೆಚ್ಚಿನ ಆನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>