<p>ಶಿವಮೊಗ್ಗ: ಪುನೀತ್ ರಾಜ್ಕುಮಾರ್ ಅಪ್ರತಿಮ ನಟ. ಅದಕ್ಕೂ ಮಿಗಿಲಾಗಿ ಅವರೊಬ್ಬ ಮಾನವೀಯ ಅಂತಃಕರಣವುಳ್ಳ ಪರಿಪೂರ್ಣ ವ್ಯಕ್ತಿಯಾಗಿದ್ದರು ಎಂದು ಪತ್ರಕರ್ತ ಎನ್.ರವಿಕುಮಾರ್ ಟೆಲೆಕ್ಸ್ ಸ್ಮರಿಸಿದರು.</p>.<p>ಇಲ್ಲಿನ ಟ್ಯಾಂಕ್ ಮೊಹಲ್ಲಾದ ಜೈಭುವನೇಶ್ವರಿ ಸದ್ಭಾವನಾ ಕನ್ನಡ<br />ಯುವಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪುನೀತ್ ರಾಜ್ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿದ್ದ ಪುನೀತ್ ತಮ್ಮೊಳಗಿನ ಮಾನವೀಯ ನಡೆಯಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು. ತಂದೆಯ ಪ್ರತಿರೂಪದಂತೆ ವಿನಯವಂತಿಕೆ, ನಿಷ್ಮಕಲ್ಮಷ ಪ್ರೀತಿ, ವಿಶ್ವಾಸಗಳಿಂದ ಜನಮಾನಸದಲ್ಲಿ ಉಳಿದಿದ್ದರು ಎಂದರು.</p>.<p>ತಮ್ಮ ದುಡಿಮೆಯ ಒಂದು ಪಾಲನ್ನು ಈ ಸಮಾಜದ ನಿರ್ಗತಿಕರಿಗೆ, ಅನಾಥ ಮಕ್ಕಳಿಗೆ ಮೀಸಲಾಗಿಟ್ಟದ್ದ ಪುನೀತ್ ಅವರು ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ನಿರ್ಮಲವಾಗಿ ಸೇವೆಗೈಯುತ್ತಿದ್ದರು. ಇದು ಅವರಲ್ಲಿನ ಮಾನವೀಯತೆಗೆ ಸಾಕ್ಷಿ. ಅವರ ಅಕಾಲಿಕ ನಿಧನದಿಂದ ಸಮಾಜ ಪರಿಪೂರ್ಣ ಜೀವವೊಂದನ್ನು ಕಳೆದುಕೊಂಡು ಬಡವಾದಂತಾಗಿದೆ ಎಂದು ಹೇಳಿದರು.</p>.<p>‘ಪುನೀತ್ ನಿಧನದಿಂದ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುವಂತಾಗಿದೆ. ಅವರ ಬದುಕಿನ ಆದರ್ಶಗಳನ್ನು ನಾವು ಅಳವಡಿಸಿಕೊಂಡಾಗ ಅವರ ಆತ್ಮಕ್ಕೆ ನಿಜ ಗೌರವ ಸಲ್ಲಿಸದಂತಾಗುತ್ತದೆ’ ಎಂದು ಪ್ರಾರ್ಥಿಸಿದರು.</p>.<p>ಸಂಘದ ಅಧ್ಯಕ್ಷರಾದ ಸುರೇಶ್, ಮುಖಂಡರಾದ ಸೀತಾರಾಂ, ಲಕ್ಷ್ಮಣ,<br />ಮಂಜುನಾಥ್, ಪ್ರೇಮ್, ಮೇಘರಾಜ್, ಭೋಜರಾಜ, ಸಿ.ಬಿ ಚಂದ್ರಶೇಖರ್, ಅವಿನಾಶ್, ಆದರ್ಶ, ರಾಮಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಪುನೀತ್ ರಾಜ್ಕುಮಾರ್ ಅಪ್ರತಿಮ ನಟ. ಅದಕ್ಕೂ ಮಿಗಿಲಾಗಿ ಅವರೊಬ್ಬ ಮಾನವೀಯ ಅಂತಃಕರಣವುಳ್ಳ ಪರಿಪೂರ್ಣ ವ್ಯಕ್ತಿಯಾಗಿದ್ದರು ಎಂದು ಪತ್ರಕರ್ತ ಎನ್.ರವಿಕುಮಾರ್ ಟೆಲೆಕ್ಸ್ ಸ್ಮರಿಸಿದರು.</p>.<p>ಇಲ್ಲಿನ ಟ್ಯಾಂಕ್ ಮೊಹಲ್ಲಾದ ಜೈಭುವನೇಶ್ವರಿ ಸದ್ಭಾವನಾ ಕನ್ನಡ<br />ಯುವಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪುನೀತ್ ರಾಜ್ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿದ್ದ ಪುನೀತ್ ತಮ್ಮೊಳಗಿನ ಮಾನವೀಯ ನಡೆಯಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು. ತಂದೆಯ ಪ್ರತಿರೂಪದಂತೆ ವಿನಯವಂತಿಕೆ, ನಿಷ್ಮಕಲ್ಮಷ ಪ್ರೀತಿ, ವಿಶ್ವಾಸಗಳಿಂದ ಜನಮಾನಸದಲ್ಲಿ ಉಳಿದಿದ್ದರು ಎಂದರು.</p>.<p>ತಮ್ಮ ದುಡಿಮೆಯ ಒಂದು ಪಾಲನ್ನು ಈ ಸಮಾಜದ ನಿರ್ಗತಿಕರಿಗೆ, ಅನಾಥ ಮಕ್ಕಳಿಗೆ ಮೀಸಲಾಗಿಟ್ಟದ್ದ ಪುನೀತ್ ಅವರು ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ನಿರ್ಮಲವಾಗಿ ಸೇವೆಗೈಯುತ್ತಿದ್ದರು. ಇದು ಅವರಲ್ಲಿನ ಮಾನವೀಯತೆಗೆ ಸಾಕ್ಷಿ. ಅವರ ಅಕಾಲಿಕ ನಿಧನದಿಂದ ಸಮಾಜ ಪರಿಪೂರ್ಣ ಜೀವವೊಂದನ್ನು ಕಳೆದುಕೊಂಡು ಬಡವಾದಂತಾಗಿದೆ ಎಂದು ಹೇಳಿದರು.</p>.<p>‘ಪುನೀತ್ ನಿಧನದಿಂದ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುವಂತಾಗಿದೆ. ಅವರ ಬದುಕಿನ ಆದರ್ಶಗಳನ್ನು ನಾವು ಅಳವಡಿಸಿಕೊಂಡಾಗ ಅವರ ಆತ್ಮಕ್ಕೆ ನಿಜ ಗೌರವ ಸಲ್ಲಿಸದಂತಾಗುತ್ತದೆ’ ಎಂದು ಪ್ರಾರ್ಥಿಸಿದರು.</p>.<p>ಸಂಘದ ಅಧ್ಯಕ್ಷರಾದ ಸುರೇಶ್, ಮುಖಂಡರಾದ ಸೀತಾರಾಂ, ಲಕ್ಷ್ಮಣ,<br />ಮಂಜುನಾಥ್, ಪ್ರೇಮ್, ಮೇಘರಾಜ್, ಭೋಜರಾಜ, ಸಿ.ಬಿ ಚಂದ್ರಶೇಖರ್, ಅವಿನಾಶ್, ಆದರ್ಶ, ರಾಮಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>