<p><strong>ಸಾಗರ: </strong>‘ನನ್ನ ತಂದೆಯ ಆಸೆಯಂತೆ ಕೃಷಿ ವಿಶ್ವವಿದ್ಯಾಲಯದ ಪದವಿ ಪಡೆಯಬೇಕು ಎಂಬ ಹಂಬಲ ನಾಲ್ಕು ಚಿನ್ನದ ಪದಕಗಳೊಂದಿಗೆ ಈಡೇರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಹೇಳುವಾಗ ಶಿವಮೊಗ್ಗದ ಸಂಜಿತಾ ಎನ್.ಎಸ್. ಅವರ ಕಣ್ಣುಗಳಲ್ಲಿ ಮಿಂಚಿನ ಹೊಳೆ ಹರಿದಿತ್ತು. </p>.<p>ಶಿವಮೊಗ್ಗದ ರವೀಂದ್ರ ನಗರದಲ್ಲಿ ಅಡುಗೆ ಭಟ್ಟರಾಗಿರುವ ಸುರೇಶ್, ಗೃಹಿಣಿ ಸುಧಾ ಅವರ ಪುತ್ರಿ ಸಂಜಿತಾ ಎಂಎಸ್ಸಿಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. </p>.<p>‘ಆರ್ಥಿಕವಾಗಿ ನಮ್ಮ ಕುಟುಂಬ ಸಬಲವಾಗಿಲ್ಲ. ಹೀಗಾಗಿ ಶಿಕ್ಷಣವೇ ನಮಗೆ ಆಧಾರಸ್ತಂಭ ಎಂಬ ತಿಳಿವಳಿಕೆಯಿಂದ ಶ್ರಮ ವಹಿಸಿ ಓದಿದ ಪರಿಣಾಮವಾಗಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಮುಂದೆ ಸಂಶೋಧನೆ ಕೈಗೊಂಡು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಗುರಿ ಇದೆ’ ಎಂದು ಸಂಜಿತಾ ಹೇಳಿದರು. </p>.<p>ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಿರಿಯೂರಿನ ತೋಟಗಾರಿಕೆ ಕಾಲೇಜಿನಲ್ಲಿ ಅಧ್ಯಯನ ನಡೆಸಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವ ಕೆ.ಬಿ. ದೇವಿಕಾ, ‘ ನನ್ನ ಅಜ್ಜಿಯ ಇಚ್ಛೆಯಂತೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂಬುದು ಮುಂದಿನ ಗುರಿಯಾಗಿದೆ’ ಎಂದು ಸಂತಸ ಹಂಚಿಕೊಂಡರು. </p>.<p>ಹುಟ್ಟಿನಿಂದಲೇ ಎರಡೂ ಕಾಲಗಳ ಸ್ವಾಧೀನವನ್ನು ಕಳೆದುಕೊಂಡು ಊರುಗೋಲಿನ ಸಹಾಯದಿಂದಲೇ ನಡೆಯುವ ಚನ್ನಗಿರಿಯ ನವೀನ್ ಎ.ಡಿ. ಎಂಎಸ್ಸಿ ಪದವಿ ಪಡೆದ ಸಂಭ್ರಮವನ್ನು ಹಂಚಿಕೊಂಡರು.</p>.<p>‘ಅಂಗವೈಕಲ್ಯ ಎಂಬುದು ನನಗೆ ಯಾವತ್ತೂ ಸಮಸ್ಯೆಯಾಗಿಲ್ಲ. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲೆ ಮುಂದುವರಿಯಬೇಕು ಎಂಬುದು ನನ್ನ ಮಹದಾಸೆ. ಅದಕ್ಕೆ ಪೂರಕವಾಗಿ ಕೃಷಿ ವಿಸ್ತರಣೆ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ’ ಎಂದು ಹೇಳುವಾಗ ನವೀನ್ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>‘ನನ್ನ ತಂದೆಯ ಆಸೆಯಂತೆ ಕೃಷಿ ವಿಶ್ವವಿದ್ಯಾಲಯದ ಪದವಿ ಪಡೆಯಬೇಕು ಎಂಬ ಹಂಬಲ ನಾಲ್ಕು ಚಿನ್ನದ ಪದಕಗಳೊಂದಿಗೆ ಈಡೇರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಹೇಳುವಾಗ ಶಿವಮೊಗ್ಗದ ಸಂಜಿತಾ ಎನ್.ಎಸ್. ಅವರ ಕಣ್ಣುಗಳಲ್ಲಿ ಮಿಂಚಿನ ಹೊಳೆ ಹರಿದಿತ್ತು. </p>.<p>ಶಿವಮೊಗ್ಗದ ರವೀಂದ್ರ ನಗರದಲ್ಲಿ ಅಡುಗೆ ಭಟ್ಟರಾಗಿರುವ ಸುರೇಶ್, ಗೃಹಿಣಿ ಸುಧಾ ಅವರ ಪುತ್ರಿ ಸಂಜಿತಾ ಎಂಎಸ್ಸಿಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. </p>.<p>‘ಆರ್ಥಿಕವಾಗಿ ನಮ್ಮ ಕುಟುಂಬ ಸಬಲವಾಗಿಲ್ಲ. ಹೀಗಾಗಿ ಶಿಕ್ಷಣವೇ ನಮಗೆ ಆಧಾರಸ್ತಂಭ ಎಂಬ ತಿಳಿವಳಿಕೆಯಿಂದ ಶ್ರಮ ವಹಿಸಿ ಓದಿದ ಪರಿಣಾಮವಾಗಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಮುಂದೆ ಸಂಶೋಧನೆ ಕೈಗೊಂಡು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಗುರಿ ಇದೆ’ ಎಂದು ಸಂಜಿತಾ ಹೇಳಿದರು. </p>.<p>ಕೇರಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಿರಿಯೂರಿನ ತೋಟಗಾರಿಕೆ ಕಾಲೇಜಿನಲ್ಲಿ ಅಧ್ಯಯನ ನಡೆಸಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವ ಕೆ.ಬಿ. ದೇವಿಕಾ, ‘ ನನ್ನ ಅಜ್ಜಿಯ ಇಚ್ಛೆಯಂತೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂಬುದು ಮುಂದಿನ ಗುರಿಯಾಗಿದೆ’ ಎಂದು ಸಂತಸ ಹಂಚಿಕೊಂಡರು. </p>.<p>ಹುಟ್ಟಿನಿಂದಲೇ ಎರಡೂ ಕಾಲಗಳ ಸ್ವಾಧೀನವನ್ನು ಕಳೆದುಕೊಂಡು ಊರುಗೋಲಿನ ಸಹಾಯದಿಂದಲೇ ನಡೆಯುವ ಚನ್ನಗಿರಿಯ ನವೀನ್ ಎ.ಡಿ. ಎಂಎಸ್ಸಿ ಪದವಿ ಪಡೆದ ಸಂಭ್ರಮವನ್ನು ಹಂಚಿಕೊಂಡರು.</p>.<p>‘ಅಂಗವೈಕಲ್ಯ ಎಂಬುದು ನನಗೆ ಯಾವತ್ತೂ ಸಮಸ್ಯೆಯಾಗಿಲ್ಲ. ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲೆ ಮುಂದುವರಿಯಬೇಕು ಎಂಬುದು ನನ್ನ ಮಹದಾಸೆ. ಅದಕ್ಕೆ ಪೂರಕವಾಗಿ ಕೃಷಿ ವಿಸ್ತರಣೆ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ’ ಎಂದು ಹೇಳುವಾಗ ನವೀನ್ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>