ಶಿವಮೊಗ್ಗದ ಬಾಪೂಜಿ ನಗರದ ತುಂಗಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಸತ್ಯನಾರಾಯಣ್ ಅವರು ₹ 60 ಸಾವಿರ ಮೌಲ್ಯದ ಬಂಗಾರದಉಂಗುರವನ್ನು ಕಳೆದುಕೊಂಡಿದ್ದರು. ಗುರುವಾರ ಬೆಳಿಗ್ಗೆ ಈ ಉಂಗುರ ಅದೇ ಶಾಲೆಯ ವಿದ್ಯಾರ್ಥಿ ಫಯಾಜ್ಗೆ ಸಿಕ್ಕಿತ್ತು. ಅದನ್ನು ಆತ ಶಿಕ್ಷಕರಿಗೆ ಹಿಂದಿರುಗಿಸಿದ್ದಾನೆ. ವಿದ್ಯಾರ್ಥಿಯ ಪ್ರಾಮಾಣಿಕತೆ ಮೆಚ್ಚಿ, ಶಿಕ್ಷಕರು ಆತನಿಗೆ ಬಹುಮಾನ ನೀಡಿ ಅಭಿನಂದಿಸಿದ್ದಾರೆ.