ಕಿರುವಾಸೆ ಗ್ರಾಮದ ಸರ್ವೆ ನಂ. 187ರಲ್ಲಿ 76 ಎಕರೆ 207ರಲ್ಲಿ 248 ಎಕರೆ, 214ರಲ್ಲಿ 214 ಎಕರೆ ಹಾಗೂ 185ರಲ್ಲಿ 121 ಎಕರೆ ಸೇರಿ ಒಟ್ಟು 626 ಎಕರೆ ಕಂದಾಯ ಹಾಗೂ ಕೆ.ಪಿ.ಸಿ ಭೂಮಿಯಲ್ಲಿ ಎಂಪಿಎಂ ಅಧಿಕಾರಿಗಳಿಂದ ಅರಣ್ಯ ಮರು ನೆಡುತೋಪು ಆರಂಭಿಸಲು ಸಿದ್ಧತೆ ನಡೆದಿದೆ. ಅದನ್ನು ಮಾಡದಂತೆ ತಡೆ ನೀಡಲು ಇಲ್ಲಿನ ಕಿರುವಾಸೆ ಗ್ರಾಮದ ಶಿವರಾಜ್ ಕೆ.ಎನ್, ಮಂಜುನಾಥ್, ಅರುಣ್, ಪರಮೇಶ್ವರ, ಮಂಜುನಾಥ ಮತ್ತಿತರರು ಸಾಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.