ಶಿವಮೊಗ್ಗ: ಆಶಾ ಕಾರ್ಯಕರ್ತರಿಗೆಮಾಸಿಕ ₹ 12 ಸಾವಿರ ಗೌರವಧನ ಖಾತರಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯಕ್ತ ಆಶಾಕಾರ್ಯಕರ್ತೆಯರಸಂಘಟನೆ ಸದಸ್ಯರುಶುಕ್ರವಾರಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸುರಕ್ಷಣಾ ಸಾಮಾಗ್ರಿ ನೀಡಬೇಕು. ಕೋವಿಡ್ಗೆತುತ್ತಾದ ಕಾರ್ಯಕರ್ತೆಯರಿಗೆಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.
ಸಂಪೂರ್ಣ ಸೇವೆ ಸ್ಥಗಿತಗೊಳಿಸಿರುವಆಶಾ ಕಾರ್ಯಕರ್ತೆಯರುಅನಿರ್ದಿಷ್ಟಾವಧಿಹೋರಾಟಹಮ್ಮಿಕೊಂಡಿದ್ದಾರೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಈ ಹಿಂದೆಯೇ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಈಚೆಗೆಕೇಂದ್ರ ಆರೋಗ್ಯ ಸಚಿವಾಲಯಕೊರೊನಾವಿರುದ್ಧದ ಹೋರಾಟದಲ್ಲಿಮಾಡಿದ ಉತ್ತಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೊರೋನಾ ತಡೆ ಯಶಸ್ಸಿಗೆನೀಡಿದ ಕೊಡುಗೆಶ್ಲಾಘಿಸಲಾಗಿದೆ ಎಂದರು.
ವೇತನವಿಲ್ಲದೇ, ರಕ್ಷಣೆ ಇಲ್ಲದೇ ಬಳಲಿ ಬೆಂಡಾಗಿದ್ದಾರೆ. ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೇ ಅನಿಶ್ಚಿತ ವೇತನಪಡೆಯುತ್ತಿದ್ದಾರೆ. ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಗೌರವಧನ, ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ₹ 12 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.