ಅದ್ಭುತ ಲಯ, ಅಪಾರ ಶ್ರುತಿ ಬದ್ಧತೆ, ರಂಗ ನಡೆಗಳು, ಪೌರಾಣಿಕ ಪ್ರಜ್ಞೆ, ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರ ಗಮನ ಸೆಳೆಯುವ ಮಾಂತ್ರಿಕ ಶಕ್ತಿ ಕರಗತ ಮಾಡಿಕೊಂಡಿರುವ ಅವರು ಮೇಳದ ತಿರುಗಾಟ ನಿಲ್ಲಿಸಿದರೂ, ಗಜ್ಜೆಕಟ್ಟಿ ಯುವಕರನ್ನು ನಾಚಿಸುವಂತೆ ಉತ್ಸಾಹದಲ್ಲಿ ಕುಣಿಯುತ್ತಿದ್ದಾರೆ. ಬಡಗುತಿಟ್ಟು ಯಕ್ಷರಂಗವನ್ನು ಶ್ರೀಮಂತ ಗೊಳಿಸಿದ ಹೆಗ್ಗಳಿಕೆ ಅವರದು.