ಮುಟುಗುಪ್ಪೆ ಗ್ರಾಮದ ಉಷಾ ಸುಮಾ ಅವರು ಸಿದ್ಧಪಡಿಸಿದ್ದ ಹಲಸಿನ ಮಂಚೂರಿಗೆ ಹೆಚ್ಚಿನ ಬೇಡಿಕೆ ಇತ್ತು. ಹುಳೆಗಾರು ಗ್ರಾಮದ ಶ್ರೀನಿಧಿ ಹಾಗೂ ಶ್ರೀಮಾತಾ ಸ್ತ್ರೀಶಕ್ತಿ ಸಂಘದ ಹಲಸಿನ ಬೀಜದಲ್ಲಿ ಸೂಪ್, ಹಲಸಿನ ತೊಳೆಯಿಂದ ಎಣ್ಣೆಗಾಯಿ, ಹೋಳಿಗೆ ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ರಿಪ್ಪನ್ಪೇಟೆಯ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿಯವರು ಮಂಕಾಳೆ ರೆಡ್, ಭದ್ರಾವತಿ ಯೆಲ್ಲೋ, ರುದ್ರಾಕ್ಷಿ ಕೆಂಪು, ರುದ್ರಾಕ್ಷಿ ಹಳದಿ, ಬ್ರೆಜಿಲ್ 365, ಸಿಂಧೂರ, ಗಮ್ ಲೆಸ್ , ಸಿಂಗಾಪುರ ವಾಡಾ, ಥೈಲಾಂಡ್ ರೆಡ್ ಮೊದಲಾದ ತಳಿಯ ಹಲಸಿನ ಸಸಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಕೆಲವು ತಳಿಗಳ ಮೂಲಕ ಬೆಳೆದ ಹಲಸಿನ ಸೊಳೆಗಳ ಸ್ಯಾಂಪಲ್ ಕೂಡ ಅಲ್ಲಿತ್ತು.