ಜುಲೈ 22ರೊಳಗೆ ಆರೋಪಿ ಮೋಹನ್ನನ್ನು ಬಂಧಿಸಬೇಕು ಎಂದು ಶಿವಮೊಗ್ಗ ಸೆಷನ್ಸ್ ನ್ಯಾಯಾಲಯ ಗಡುವು ವಿಧಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ನಗರ ಠಾಣೆಯ ಪ್ರಭಾರ ಪಿಎಸ್ಐ ಸೂರಪ್ಪ, ಎಎಸ್ಐ ಶ್ರೀಪಾದ್, ಉದಯಕುಮಾರ್, ಗಂಗಪ್ಪ
ಬಟೋಳಿ, ಗಂಗಪ್ಪ ತುಂಗಳ್, ರಮೇಶ ನೇತೃತ್ವದ ತಂಡ ಖಚಿತ ಮಾಹಿತಿ ಮೇಲೆ ರಾತ್ರಿ ವೇಳೆ ಬಂಡೋಡಿಯ ದಟ್ಟಡವಿಯಲ್ಲಿ ಕಾರ್ಯಾಚರಣೆ ಕೈಗೊಂಡಿತು.