ಶಿವಮೊಗ್ಗ: ರಿವಾಲ್ವಾರ್ ತೋರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಬೆದರಿಸಿದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಕಲೀಂವುಲ್ಲಾ ಬಂಧಿತ ಆರೋಪಿ.
ಜುಲೈ 16ರ ರಾತ್ರಿ 10ಕ್ಕೆ ಚಾಲುಕ್ಯ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಬೀಬ್ ಖಾನ್ ಕಾರಿನಲ್ಲಿ ಬರುತ್ತಿದ್ದಾಗ ಅವರನ್ನು ಅಡ್ಡಗಟ್ಟಿ ಅವರಿಗೆ ರಿವಾಲ್ವಾರ್ ತೋರಿಸಿ, ಕೊಲೆ ಬೆದರಿಕೆ ಹಾಕಲಾಗಿತ್ತು. ಹಬೀಬ್ ಅವರ ಪುತ್ರ ಮತ್ತು ಆತನ ಸ್ನೇಹಿತ ಅಲ್ಲಿಗೆ ಬಂದ ಕಾರಣ ಐವರು ಪರಾರಿಯಾಗಿದ್ದರು.
ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿತ್ತು.
ಘಟನೆ ಹಿನ್ನೆಲೆ: ರಿಯಲ್ಎಸ್ಟೇಟ್ ಉದ್ಯಮದಲ್ಲಿ ಪಾಲುದಾರನಾಗಿದ್ದ ಕಲೀಂವುಲ್ಲಾ ಅಲಿಯಾಸ್ ಕಲೀಂಪಾಷ ನಡುವೆ ಹಣಕಾಸಿನ ವ್ಯವಹಾರಕ್ಕೆ ಜಗಳವಾಗಿತ್ತು. ಕಲೀಂ ಹಬೀಬ್ಗೆ ಕೊಲೆ ಬೆದರಿಕೆ ಹಾಕಿದ್ದ. ಅದಕ್ಕಾಗಿ ಗುಂಪಿಗೆ ಸುಪಾರಿ ನೀಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಅಶ್ವಿನಿ ಮಾಹಿತಿ ನೀಡಿದರು.
ಚಿನ್ನಬೆಳ್ಳಿ ವ್ಯಾಪಾರಿಗೆ ಬೆದರಿಕೆ: ಮತ್ತೊಂದು ಪ್ರಕಣದಲ್ಲಿ ಜುಲೈ 16ರಂದು ಬೆಳಗ್ಗೆ ಗಾಂಧಿ ಬಜಾರ್ನ ಚಿನ್ನ-ಬೆಳ್ಳಿ ವ್ಯಾಪಾರಿ ಅನಿಸುರ್ ಇಸ್ಲಾಂ ಎಂಬುವವರಿಗೆ ಬೆದರಿಕೆ ಹಾಕಿದ್ದ ರೌಡಿ ಅತಿಕ್ನನ್ನೂ ಬಂಧಿಸಲಾಗಿದೆ.