ಜೀವನ್ ತನ್ನ ಸಹೋದರ ಸ್ವರೂಪ್ ಹಾಗೂ ಇತರೆ ಸ್ನೇಹಿತರ ಜತೆ ಪಾರ್ಟಿಗೆ ಹೋಗಿದ್ದಾರೆ. ಸ್ವರೂಪ್ ಪಕ್ಕದ ಟೇಬಲ್ನಲ್ಲಿದ್ದ ಯುವಕನನ್ನು ಮಾತನಾಡಿಸಿದ್ದಾರೆ. ಸ್ನೇಹಿತ ಅಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ. ಆದರೂ, ಆ ಗುಂಪು ಜಗಳಕ್ಕೆ ಮುಂದಾಗಿದೆ. ಅಲ್ಲಿದ್ದವರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಹೊರಗೆ ಹೋದ ಗುಂಪು ಮಾರಕಾಸ್ತ್ರಗಳನ್ನು ತಂದು ಬಾರ್ ಹೊರಗೆ ದಾಳಿ ನಡೆಸಿದೆ.