‘ಮುಸ್ಲಿಮರು ಆಜಾನ್ ಕೂಗುವುದು ಅಲ್ಲಾಹನಿಗೆ ಕೇಳಲಿ ಎಂದಲ್ಲ; ಏಕದೈವ ಆರಾಧಕರು ಸೃಷ್ಟಿಕರ್ತನಿಗೆ ತಲೆಬಾಗಿ ತಮ್ಮ ಜೀವನವನ್ನು ಸೃಷ್ಟಿಕರ್ತನ ಆಜ್ಞೆಯಂತೆ ಪಾಲಿಸಲು ಕೂಗುವಂತಹ ಕರೆ ಹಾಗೂ ಪ್ರಾರ್ಥನೆ. ಆದರೆ, ಈಶ್ವರಪ್ಪ ಅವರು ನೀಡಿರುವ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯಾಗಿದೆ. ಹೀಗಾಗಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.