ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಅಕ್ರಮವಾಗಿ ಜಮೀನು ಕಬಳಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ತಹಸೀಲ್ದಾರ್ ಅವರು ತೆರವು ಆದೇಶ ಹೊರಡಿಸಿದ್ದರು. ಆ ಮೇರೆಗೆ ಕಂದಾಯ ಇಲಾಖೆಯು ಅಕ್ರಮವಾಗಿ ಕಟ್ಟಿದ್ದ ಗುಡಿಸಲನ್ನು ನಾಶ ಮಾಡಿತ್ತು. ಅಲ್ಲದೇ ಅಕ್ರಮವಾಗಿ ಹಾಕಿಕೊಂಡಿದ್ದ ಬೇಲಿ ಕಿತ್ತುಹಾಕಿತ್ತು. ಇದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಶಾಸಕ ಹಾಲಪ್ಪ ಹರತಾಳು ಅವರು ದಿಢೀರ್ ಪ್ರತಿಭಟನೆ ಮಾಡುವ ಮೂಲಕ ಈ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.