‘ಆನೆಗಳನ್ನು ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿಗಳ ನಡುವೆ ಬಡ್ತಿಯ ವಿಚಾರದಲ್ಲಿ ಸಂಘರ್ಷ ಇದ್ದು, ಈ ದ್ವೇಷ ಆನೆಯ ಬಾಲಕ್ಕೆ ಮುಳುವಾಗಿದೆ. ಅರಣ್ಯ ಇಲಾಖೆಯು 10 ದಿನಗಳ ಹಿಂದೆ ಕ್ಯಾಂಪಿನ ನಾಲ್ವರು ಕಾವಾಡಿಗಳಿಗೆ ಮಾವುತರಾಗಿ ಬಡ್ತಿ ನೀಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಅದರಲ್ಲಿ ಭಾನುಮತಿಯನ್ನು ನೋಡಿಕೊಳ್ಳುವ ಕಾವಾಡಿಯ ಹೆಸರು ಇದೆ. ಭಾನುಮತಿಗೆ ಆಗಿರುವ ಗಾಯವನ್ನು ನೋಡಿದರೆ ಅದು ಕಾಡಿನಲ್ಲಿ ಆಹಾರ ಅರಸುವಾಗ ಆಗಿರುವ ಆಕಸ್ಮಿಕ ಗಾಯವಲ್ಲ. ಉದ್ದೇಶಪೂರ್ವಕವಾಗಿ ಚೂಪಾದ ವಸ್ತುವಿನಿಂದ ಹೊಡೆದಂತೆ ಕಾಣುತ್ತಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.